Advertisement

ಕುಷ್ಟಗಿ: ಕೆಟ್ಟು ನಿಂತ ಲಾರಿಗೆ ಸರಕಾರಿ ಬಸ್ ಢಿಕ್ಕಿ; 9 ಜನರಿಗೆ ಗಾಯ

06:27 PM Jan 05, 2023 | Team Udayavani |

ಕುಷ್ಟಗಿ: ಕುಷ್ಟಗಿ-ಇಳಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಲಕೇರಿ ಕ್ರಾಸ್ ನಲ್ಲಿ ಕೆಟ್ಟು ನಿಂತ ಲಾರಿಗೆ ಬಸ್ ಢಿಕ್ಕಿಯಾಗಿ 9 ಜನರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

Advertisement

ಹರಿಹರದಿಂದ ಹೊಸಪೇಟೆ, ಕುಷ್ಟಗಿ ಮಾರ್ಗವಾಗಿ ವಿಜಯಪುರ ಕ್ಕೆ ಹೊರಟಿದ್ದ ಹರಪನಹಳ್ಳಿ ಘಟಕದ ಬಸ್ ಕೆಟ್ಟು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 9 ಜನರಿಗೆ ಸಣ್ಣ ಗಾಯವಾಗಿದೆ.

ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನ ನಿರ್ಲಕ್ಷ ಕಾರಣ ಎನ್ನಲಾಗಿದೆ.

ನಿಂತ ಲಾರಿಗೆ ಬಸ್ ರಭಸವಾಗಿ ಢಿಕ್ಕಿಯಾಗಿದ್ದರಿಂದ ಬಸ್ಸಿನ ಮುಂಭಾಗ ಹಾಗೂ ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪಿಎಸೈ ಮೌನೇಶ್ ರಾಠೋಡ್ ಭೇಟಿ ನೀಡಿ ಪರಿಶೀಲಿಸಿ ನಂತರ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಗೆ ಕ್ರಮ ಕೈಗೊಂಡರು. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next