Advertisement

Kushtagi: ನಾಮಪತ್ರ ಸಲ್ಲಿಕೆ ವೇಳೆ ಹಣ ಹಂಚಿದ ಆರೋಪ; ಇಬ್ಬರ ವಿರುದ್ಧ ದೂರು ದಾಖಲು

01:59 PM Apr 20, 2023 | Team Udayavani |

ಕುಷ್ಟಗಿ: ಪಟ್ಟಣದ ಪ್ಲೈಓವರ್ ಬ್ರಿಡ್ಜ್ ಕೆಳಗೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಹಣ ಹಂಚಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

ಈ ಪ್ರಕರಣದ ಹಿನ್ನೆಲೆಯಲ್ಲಿ ಮಹೇಂದ್ರ ಜೀತೋ ವಾಹನದ ಚಾಲಕ ಗರ್ಜನಾಳ ಗ್ರಾಮದ ಸಿದ್ದಪ್ಪ ಶ್ಯಾಮಪ್ಪ ಹರಿಜನ ಹಾಗೂ ಹನುಮಪ್ಪ ಶೇಖರಗೌಡ ಮಾಲಿಪಾಟೀಲ ವಿರುದ್ದ ದೂರು ದಾಖಲಿಸಲಾಗಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕಾಗಿ ಕರೆದುಕೊಂಡ ಜನರಿಗೆ ಮಹೇಂದ್ರ ಕಂಪನಿ ಜೀತೋ ವಾಹನದಲ್ಲಿ ಹಣ ಹಂಚಿಕೆ ಮಾಡಲಾಗುತ್ತಿತ್ತು.

ಈ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಪ್ಲಾಯಿಂಗ್ ಸ್ಕ್ವಾಡ್ ಜಗದೀಶಪ್ಪ ಎಂ. ಅವರ ದೂರಿನ ಮೇರೆಗೆ ಕುಷ್ಟಗಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next