Advertisement

ಕುಷ್ಟಗಿ: ಶಾಸಕ ಬಯ್ಯಾಪೂರರಿಗೆ ಟಿಕೆಟ್ ತಪ್ಪಿಸಲು ಸಜ್ಜಾದ ಭಿನ್ನರ ಗುಂಪು

09:48 PM Nov 09, 2022 | Team Udayavani |

ಕುಷ್ಟಗಿ: ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಲು ಪಕ್ಷದ ಭಿನ್ನರ ಗುಂಪು ಸಜ್ಜಾಗಿದೆ.

Advertisement

ಕುಷ್ಟಗಿ ವಿಧಾನಸಭಾ ಕ್ಷೇತ್ರ ಸತತವಾಗಿ ಗೆದ್ದಿರುವ ಉದಾಹರಣೆ ಇಲ್ಲ. ಒಮ್ಮೆ ಗೆಲ್ಲಿಸಿ, ಮತ್ತೊಮ್ಮೆ ಸೋಲುಣಿಸಿದ ಕ್ಷೇತ್ರ ಎನ್ನುವುದು ಜಗಜ್ಜಾಹೀರಾಗಿದೆ. ಬದಲಾದ ಈ ಪರಿಸ್ಥಿತಿಯಲ್ಲಿ ಈ ಬಾರಿ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸೋಲು ಖಚಿತ, ಹೀಗಾಗಿ ಬೇರೊಬ್ಬರಿಗೆ ಅವಕಾಶ ಕಲ್ಪಿಸಬೇಕೆಂದು ಅದೇ ಪಕ್ಷದ ಭಿನ್ನರ ಪಡೆ ಸಜ್ಜಾಗಿದ್ದು,ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲು ಇಲ್ಲಿಂದ ನಿಯೋಗ ಹೋಗಿದೆ ಎನ್ನಲಾಗುತ್ತಿದೆ.

ಈ ನಿಯೋಗದಲ್ಲಿ ಕಾಂಗ್ರೆಸ್ ಪಕ್ಷದ ಪರಶುರಾಮ ನಾಗರಾಳ, ಅಶೋಕ ಬಳೂಟಗಿ(ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಹೋದರ), ಪುರಸಭೆ ಸದಸ್ಯ ವಸಂತ ಮೇಲಿನಮನಿ, ಯಲ್ಲಪ್ಪ ಗದ್ದಿ, ಹನುಮಂತಪ್ಪ ಚೌಡಕಿ, ವೀರೇಶ ಬಂಗಾರಶೆಟ್ಟರ್,ಶಂಕ್ರಯ್ಯ ಕಂಪಾಪೂರಮಠ ಮತ್ತಿತರಿರುವ ಫೋಟೋ ಇದೀಗ ವೈರಲ್ ಆಗಿದೆ.

ಈ ಭಿನ್ನಮತೀಯ ಗುಂಪು ಶಾಸಕ ಬಯ್ಯಾಪೂರ ವಿರುದ್ದ ಅಸಮಾಧಾನಗೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ‌ ಬೆಳವಣಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಅನಿರೀಕ್ಷಿತ ಬೆಳವಣಿಗೆಯಾಗಿದ್ದು ಮುಂದೆ ಯಾವೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next