Advertisement

ಜಿಂದಾಲ್‌ ನೌಕರರು-ವಾಹನ ಪ್ರವೇಶಕ್ಕೆ ನಿರ್ಬಂಧ

04:26 PM Jun 13, 2020 | Naveen |

ಕುರುಗೋಡು: ಸಮೀಪದ ಕುಡಿತಿನಿ ಪಟ್ಟಣದ ಹಲವು ಜಿಂದಾಲ್‌ ಕಂಪನಿಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ನಾಗರಿಕರು ಜಿಂದಾಲ್‌ ನೌಕರರು ಮತ್ತು ಕಾರ್ಖಾನೆ ವಾಹನಗಳಿಗೆ ಪಟ್ಟಣದೊಳಗಡೆ ಪ್ರವೇಶ ಮಾಡದಂತೆ ಶುಕ್ರವಾರದಿಂದ ನಿರ್ಬಂಧ ವಿಧಿಸಿದ್ದಾರೆ.

Advertisement

ಜಿಂದಾಲ್‌ ಸಂಸ್ಥೆಯಲ್ಲಿ ಪ್ರಸ್ತುತ 101 ಕೋವಿಡ್  ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಪಟ್ಟಣವನ್ನು ಕೋವಿಡ್ ಸೋಂಕಿನಿಂದ ಮುಕ್ತ ಮಾಡಲು ಸ್ವಯಂ ಪ್ರೇರಣೆಯಿಂದ ಮುನ್ನಚ್ಚೆರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಇಲ್ಲಿನ ನಿವಾಸಿ ವಿ.ರಾಮು ಮಾತನಾಡಿ, ಪಟ್ಟಣದಲ್ಲಿನ ಜನರನ್ನು ಮತ್ತು ನಮ್ಮ ಕುಟುಂಬಗಳ ಅಮೂಲ್ಯ ಜೀವ ಉಳಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೇ ಯಾವುದೇ ಕಾರಣಕ್ಕೂ ನೌಕರರನ್ನು ಮತ್ತು ಅವರ ಕುಟುಂಬಗಳನ್ನು ಹೊರಗಡೆ ಬಿಡಬಾರದು ಹಾಗೂ ಜಿಲ್ಲಾಡಳತವು ಸಹ ಕೋವಿಡ್ ತೆಡೆಯಲು ಸಂಸ್ಥೆಗೆ ಸೂಕ್ತ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next