Advertisement

ಕರ್ನಾಟಕ ಜಾನಪದ ಪರಿಷತ್ತಿನ ಕುರುಗೋಡು ತಾಲೂಕು ಅಧ್ಯಕ್ಷರಾಗಿ ಚಾನಾಳು ಅಮರೇಶಪ್ಪ ಆಯ್ಕೆ

06:28 PM Oct 25, 2022 | Team Udayavani |

ಕುರುಗೋಡು: ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ಕುರುಗೋಡಿನ ಚಾನಾಳ್ ಅಮರೇಶಪ್ಪ ಆಯ್ಕೆಯಾಗಿದ್ದಾರೆ  ಎಂದು ಜಿಲ್ಲಾಧ್ಯಕ್ಷ ಸಿ. ಮಂಜುನಾಥ ಆದೇಶ ಹೊರಡಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಅಧ್ಯಕ್ಷ ಚಾನಾಳ ಅಮರೇಶಪ್ಪ ಮಾತನಾಡಿ,ಆದುನಿಕತೆಯ ಭರಾಟೆಯಲ್ಲಿ ಜನರು ದೇಶಿಯ ಕಲೆಯಾದ ಜನಪದವನ್ನು ಮರೆಯುತ್ತಿದ್ದಾರೆ. ಜನಪದ ಕಥೆ ಹಾಡು,ಆಟಗಳು ಅಳುವಿನ ಹಂಚಿನಲ್ಲಿವೆ ಆದ್ದರಿಂದ ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ ಕಲೆಗಳನ್ನು ಅದರ ಪರಿಚಯವುಳ್ಳ ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವುದು ಜೊತೆಗೆ ಇಂದಿನ ಮಕ್ಕಳು, ಯುವ ಜನಾಂಗಕ್ಕೆ ಅದನ್ನು ಪರಿಚಯಿಸಿ ಬೆಳಸಿ ರಕ್ಷಿಸಿ ಪೋಶಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಒಂದು ಕಾರ್ಯಕ್ಕೆ ನನ್ನನ್ನು ಗುರುತಿಸಿ ತಾಲೂಕು ಅಧ್ಯಕ್ಷ ನನ್ನಾಗಿ ನೇಮಿಸಿದ ಸಮಸ್ತ ಕರ್ನಾಟಕ ಜನಪದ ಪರಿಷತ್ತಿನ ಪ್ರತಿನಿಧಿಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next