Advertisement
ಹಾಲಿ ಶಾಸಕ ಗಣೇಶ್ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಹಳ್ಳಿ ಹಳ್ಳಿಗಳಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಾ ಮತದಾರರನ್ನು ಭೇಟಿ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದಾರೆ.
Related Articles
Advertisement
ಸದ್ಯ ಈಗ ಜನಾರ್ದನ ರೆಡ್ಡಿ ಕೂಡ ಹೊಸ ಪಕ್ಷ ಕಟ್ಟಿರುವುದರಿಂದ ಅದರಲ್ಲಿ ರೆಡ್ಡಿ ಹಣಬಲ ಹೊಂದಿರುವ ವ್ಯಕ್ತಿಯಾಗಿದ್ದು, ಈ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಿರುಗುಪ್ಪ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸೂರ್ಯನಾರಾಯಣ ರೆಡ್ಡಿ ಅವರಿಗೆ ಉಸ್ತುವಾರಿ ನೀಡಲು ಈಗಾಗಲೇ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಈ ಕುರಿತು ಕೂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕಂಡು ಬರುತ್ತಿದೆ.
ಜನಾರ್ದನ ರೆಡ್ಡಿ ಹಣ ಬಲ ಯಾವ ರೀತಿ ಹೊಂದಿದ್ದರೋ ಅದರಂತೆ ಕಾಂಗ್ರೆಸ್ ನಲ್ಲಿ ಅದಕ್ಕೆ ತಕ್ಕ ಹಾಗೆ ಹಣಬಲ ಹೊಂದಿರುವ ನಾಯಕರಿಗೆ ಉಸ್ತುವಾರಿ ಕೊಟ್ಟು, ಬಿಜೆಪಿ, ಜೆಡಿಎಸ್, ಕೆ.ಆರ್.ಪಿ.ಪಿ. ಪಕ್ಷವನ್ನು ಕಟ್ಟಿ ಹಾಕಿ ಕಾಂಗ್ರೆಸ್ ನ್ನು ಗೆಲ್ಲಿಸಲು ನಾನಾ ರಣತಂತ್ರಗಳನ್ನು ಕಾಂಗ್ರೆಸ್ ರೂಪಿಸುತ್ತಿದೆ.
ಅದರಲ್ಲಿ ಸೂರ್ಯನಾರಾಯಣ ರೆಡ್ಡಿ ಸಿರುಗುಪ್ಪ, ಕಂಪ್ಲಿ, ಬಳ್ಳಾರಿ, ಸಂಡೂರು ಹೊಸಪೇಟೆ ಸೇರಿದಂತೆ ಇತರೆ ಭಾಗದಲ್ಲಿ ವರ್ಚಸ್ಸು ಚೆನ್ನಾಗಿ ಇರುವ ಕಾರಣ ಕಾಂಗ್ರೆಸ್ ಗೆಲ್ಲಿಸಲು ರೆಡ್ಡಿಯನ್ನು ಮಣಿ ಹಾಕುತ್ತಿದ್ದಾರೆ.
ಈಗಾಗಲೇ ಸೂರ್ಯನಾರಾಯಣ ರೆಡ್ಡಿಗೆ ಉಸ್ತುವಾರಿ ಕೊಡುವ ಸುದ್ದಿ ಕುರುಗೋಡು ಮತ್ತು ಕಂಪ್ಲಿ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದ್ದು, ಇದರಿಂದ ಕೆಲ ತಿಂಗಳಗಳಿಂದ ಸೂರ್ಯನಾರಾಯಣ ರೆಡ್ಡಿಗೆ ಮತ್ತು ಶಾಸಕ ಗಣೇಶ್ ಇಬ್ಬರ ನಡುವೆ ಅಸಮಾಧಾನ ವ್ಯಕ್ತವಾಗಿದ್ದು, ಮೊದಲಿನಂತೆ ಅವರ ನಡವಳಿಕೆಗಳು ಕಂಡು ಬರುತ್ತಿಲ್ಲ. ಆದ್ದರಿಂದ ರೆಡ್ಡಿಗೆ ಉಸ್ತುವಾರಿಯ ಜವಾಬ್ದಾರಿ ಸಿಕ್ಕಿದರೆ ಕಂಪ್ಲಿಯಲ್ಲಿ ಗಣೇಶ್ ಗೆಲ್ಲಲು ಕಂಟಕವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.