Advertisement

Kurugodu; ಹೊಲಕ್ಕೆ ನೀರು ಹರಿಸುವಾಗ ಹಾವು ಕಡಿದು ರೈತ ಮೃತ್ಯು

07:08 PM Sep 24, 2023 | Team Udayavani |

ಕುರುಗೋಡು: ಹೊಲಕ್ಕೆ ನೀರು ಹರಿಸುವಾಗ ಹಾವಿನ ಕಡಿತದಿಂದಾಗಿ ಓರ್ವ ರೈತ ಮೃತಪಟ್ಟ ದುರ್ಘನೆೆ ತಾಲೂಕಿನ ಎಮ್ಮಿಗನೂರು ಗ್ರಾಮದ ಬಳಿಯಲ್ಲಿರುವ ತಿಮ್ಮಣಕೇರಿ ಕ್ಯಾಂಪಿನಲ್ಲಿ ನಡೆದಿದೆ.

Advertisement

ತಿಮ್ಮಣಕೇರಿಕ್ಯಾಂಪಿನ ರೈತ ನಂದ್ಯಾಳ ರಾಮ ಭದ್ರಿರಾಜ್(45) ಮೃತಪಟ್ಟ ದುರ್ದೈವಿ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಎಮ್ಮಿಗನೂರು ಗ್ರಾಮ ದಂಡಾಧಿಕಾರಿ ಮಂಜುನಾಥ ಅವರು ಮೃತ ಕುಟುಂಬಸ್ಥರ ಮನೆಗೆ ತೆರಳಿ, ಘಟನೆಯ ವಿವರ ಸಂಗ್ರಹಿಸಿದ, ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮತ್ತು ಸರ್ಕಾರಿದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಎಮ್ಮಿಗನೂರು ಗ್ರಾಪಂ ವ್ಯಾಪ್ತಿಗೆ ಬರುವ ತಿಮ್ಮಣಕೇರಿ ಕ್ಯಾಂಪಿನ ರೈತನಾದ ನಂದ್ಯಾಳ ರಾಮ ಭದ್ರಿರಾಜ್ ಭಾನುವಾರ ಬೆಳಗ್ಗೆ ದಿನನಿತ್ಯದಂತೆ ಹೊಲಕ್ಕೆ ತೆರಳಿ, ಕೃಷಿ ಚಟುವಟಿಕೆ ನಡೆಸಿ ಹೊಲಕ್ಕೆ ನೀರು ಹಾಯಿಸುವ ವೇಳೆ ಹುರಿಪಂಚರಿ ಹಾವು ಕಚ್ಚಿದೆ. ನಂತರ ಚಿಕಿತ್ಸೆಗಾಗಿ ಕಂಪ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು, ಆರೋಗ್ಯ ಅಧಿಕಾರಿಗಳಿಂದ ಚಿಕಿತ್ಸೆ ಪಡೆದ ನಂತರ ಇನ್ನೇನು ಗುಣಮುಖನಾಗಿ, ತದನಂತರ ಆಸ್ಪತ್ರೆ ಆವರಣದಲ್ಲೇ ನಡೆದಾಗುವಾಗ ಮೂರ್ಛೆ ಬಂದು, ನೆಲಕ್ಕೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next