Advertisement

Kurkalu: ಗಾಂಜಾ ಮಾರಾಟ ಯತ್ನ: ಮೂವರು ವಶಕ್ಕೆ

09:30 PM Sep 09, 2023 | Team Udayavani |

ಶಿರ್ವ: ಇಲ್ಲಿನ ಕುರ್ಕಾಲು ಗ್ರಾಮದ ಬಗ್ಗೇಡಿಕಲ್ಲು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಸೆ. 9 ರಂದು ವಶಕ್ಕೆ ಪಡೆದಿದ್ದಾರೆ.

Advertisement

ಶಿರ್ವ ಠಾಣೆಯ ಪಿಎಸ್‌ಐ ಶಕ್ತಿವೇಲು ಇ. ಅವರು ಶನಿವಾರ ಬೆಳಗ್ಗೆ ರೌಂಡ್ಸ್‌ ನಲ್ಲಿದ್ದಾಗ ಕುರ್ಕಾಲು ಬಗ್ಗೇಡಿಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರೇಮನಾಥ್‌ ರೇವ್‌ (22), ಸಂಪತ್‌ ಬಂಗೇರ (25) ಮತ್ತು ವರುಣ್‌ (19) ಅವರನ್ನು ವಶಕ್ಕೆ ಪಡೆದಿದ್ದಾರೆ.

ಆಪಾದಿತ ಪ್ರೇಮನಾಥನ ಬಳಿ ವಶದಲ್ಲಿದ್ದ ಸುಮಾರು 6 ಸಾವಿರ ರೂ. ಮೌಲ್ಯದ 212 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next