Advertisement

ಅಧಿಕಾರಿಗಳಿಗೆ ಶಾಸಕರ ತರಾಟೆ: ಪ್ರತಿಭಟನೆ ಎಚ್ಚರಿಕೆ

09:38 PM Mar 04, 2021 | Team Udayavani |

ಕುಣಿಗಲ್‌: ಕೊರೊನಾ ಭೀತಿ ನಡುವೆ ಸಾಲ ಸೋಲ ಮಾಡಿ ಬಡ್ಡಿಗೆ ಹಣ ತಂದು ರೈತರುರಾಗಿ ಬೆಳೆದಿದ್ದಾರೆ. ಅವರ ಕಷ್ಟವನ್ನು ಅರ್ಥಮಾಡಿಕೊಂಡು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ತಾಕೀತು ಮಾಡಿದರು.

Advertisement

ತಾಲೂಕಿನ ವಿವಿಧ ಗ್ರಾಮಗಳಿಂದ ನಿತ್ಯಸಾವಿರಾರು ಕ್ವಿಂಟಲ್‌ರಾಗಿ ಇಲ್ಲಿನ ಎಪಿಎಂಸಿಖರೀದಿ ಕೇಂದ್ರಕ್ಕೆ ಬರುತ್ತಿದೆ. ಆದರೆ ರಾಗಿಶೇಖರಣೆಗೆ ಸಮರ್ಪಕವಾದ ಗೋದಾಮುಹಾಗೂ ಸ್ಥಳಾವಕಾಶ ಕೊರತೆ ಯಿಂದಾಗಿ ರೈತರು ಪರದಾಡುವ ಪರಿಸ್ಥಿತಿನಿರ್ಮಾಣವಾಗಿದೆ ಇದನ್ನು ಅರಿತು ಶಾಸಕಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದರು. ಸ್ಥಳಕ್ಕೆ ಭೇಟಿ ನೀಡಿದ ರೈತರ ಸಮಸ್ಯೆಯನ್ನು ಅಹವಾಲನ್ನು ಕೇಳಿ ಮರುಕಪಟ್ಟು ಆಕ್ರೋಶಗೊಂಡ ಅವರು ದೂರವಾಣಿ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್‌.ಎಂ.ಚನ್ನನಾಯಕ್‌ ಅವರನ್ನು ಸಂರ್ಪಕಿಸಿ ತರಾಟೆ ತೆಗೆದುಕೊಂಡರು.

ಶಾಸಕರು ಆಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಜಿಲ್ಲಾಧಿಕಾರಿ, ವೈ.ಆರ್‌.ಪಾಟೀಲ್‌ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರಾಗಿ ಖರೀದಿ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಟ್ಟರು, ರೈತರ ಸಮಸ್ಯೆ ಸೂಕ್ಷವಾಗಿದೆ ಇದನ್ನು ಕೂಡಲೇ ಬಗೆಹರಿಸಬೇಕು.ಇಲ್ಲವಾದಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತುಕೊಂಡು ಕುಣಿಗಲ್‌ ಎಪಿಎಂಸಿ ಗೋದಾಮು ಹಾಗೂ ತುಮಕೂರು ಗುಬ್ಬಿಗೇಟ್‌ ಮತ್ತು ನೆಲಮಂಗಲದ ಗೋದಾಮಿನಲ್ಲಿ ಖರೀದಿಸಿದ ರಾಗಿ ಸಂಗ್ರಹಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಹೆಚ್ಚುವರಿ ರಾಗಿ ಮತ್ತು ಲೋಡ್‌ಗಳನ್ನು ವ್ಯವಸ್ಥೆ ಮಾಡುವ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆದರು.

ಕೇಂದ್ರದ ಬಳಿ ಹೆಚ್ಚಿದ ರೈತರು: ಈ ಬಾರಿ ತಾಲೂಕಾದ್ಯಂತ ಉತ್ತಮ ಮಳೆಯಾಗಿ ರೈತರು ಬಂಪರ್‌ ರಾಗಿ ಬೆಳೆ ಬೆಳೆದಿದ್ದಾರೆ. ಈ ನಿಟ್ಟಿನಲ್ಲಿ ರೈತರಿಂದ ಬೆಂಬಲ ಬೆಲೆಗೆ ರಾಗಿ ಖರೀದಿಸಲು ಪಟ್ಟಣದ ಎಪಿಎಂಸಿ ಅವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ತಾಲೂಕಿನ ವಿವಿಧಭಾಗಗಳಿಂದ ನಿತ್ಯ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ನಿರೀಕ್ಷೆಗೂ ಮೀರಿ ಎತೇತ್ಛವಾಗಿ ರಾಗಿಯನ್ನು ರೈತರು ತರುತ್ತಿದ್ದಾರೆ. ಇದರಿಂದ ಎಪಿಎಂಸಿ ಅವರಣ, ತಂಗುದಾಣ ಮೊದಲಾದ ಕಡೆ ರಾಗಿ ಶೇಖರಣೆಯಿಂದ ತುಂಬಿ ತುಳುಕುತ್ತಿದೆ. ರಾಗಿ ಖರೀದಿ ಅಂತಿಮ ದಿನಾಂಕ ಮುಗಿಯಲಿದೆ ಎಂದು ಆತಂಕಗೊಂಡ ರೈತರು ಖರೀದಿ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದು, ಸಮಸ್ಯೆ ಸೃಷ್ಟಿಯಾಗಿದೆ.

Advertisement

ಶಾಸಕರಿಂದ ಊಟದ ವ್ಯವಸ್ಥೆ: ತಾಲೂಕಿನ ದೂರದ ಊರುಗಳಿಂದ ಖರೀದಿ ಕೇಂದ್ರಕ್ಕೆ ಬಂದ ರೈತರು ಊಟಕ್ಕಾಗಿ ಪರದಾಡುವ ಸಮಸ್ಯೆಯನ್ನು ತಿಳಿದ ಶಾಸಕರು ತಮ್ಮ ಸ್ವಂತಿಕೆಯಿಂದ ರೈತರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಊಟ ಬಡಿಸಿದರು.  ಬಳಿಕ ಅವರೊಂದಿಗೆ ಊಟ ಮಾಡಿದ್ದು, ರೈತರ ಮೆಚ್ಚಿಗೆಗೆ ಪಾತ್ರರಾದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಡಾ.ರಂಗನಾಥ್‌ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ್ದಾಗಿ ಸಮಸ್ಯೆಗಳು ಸೃಷ್ಟಿಯಾಗಿದೆ. ತಾಲೂಕಿನ ಎಲ್ಲಾ ಅರ್ಹ ರೈತರು ರಾಗಿ ಖರೀದಿಗೆ ಕ್ರಮಕೈಗೊಳ್ಳಲಾಗುವುದು. ಹಾಗಾಗಿ,ರೈತರು ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು.

ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌,ಸಿಪಿಐ ರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ಎಪಿಎಂಸಿ ವ್ಯವಸ್ಥಾಪಕಿಹೇಮಲತಾ, ಆಹಾರ ಶಿರಸ್ತೇದಾರಮಲ್ಲಿಕಾರ್ಜುನಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next