Advertisement

ಕುಣಿಗಲ್ ಹೆಸರಾಂತ ಹೋಟೆಲ್ ಮಾಲೀಕ ಶತಾಯುಷಿ ಭೂತಯ್ಯ ನಿಧನ  

08:36 PM Sep 05, 2022 | Team Udayavani |

ಕುಣಿಗಲ್ : ಕುಣಿಗಲ್ ಪಟ್ಟಣದ ಹೆಸರಾಂತ ತಟ್ಟೆ ಇಡ್ಲಿ ಹೋಟೆಲ್ ಮಾಲೀಕ ಶತಾಯಿಶಿ ಟಿ.ಎಂ.ಮಹದೇವಯ್ಯ(ಭೂತಯ್ಯ) ಸೋಮವಾರ ಆನಾರೋಗ್ಯದಿಂದ ನಿಧನ ಹೊಂದಿದ್ದಾರೆ.ಅವರಿಗೆ 102 ವರ್ಷ ವಯಸ್ಸಾಗಿತ್ತು.

Advertisement

ಮೃತರು ಪತ್ನಿ, ಮೂರು ಜನ ಗಂಡು, ನಾಲ್ಕು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಸುಮಾರು 50 ವರ್ಷಗಳಿಂದ ತಟ್ಟೆ ಇಡ್ಲಿ ವ್ಯಾಪಾರ ಮಾಡುತ್ತಿದ್ದರು, ಸಚಿವರು, ಚಲನಚಿತ್ರ ನಟ, ನಟಿಯರು, ಗಣ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬಂದು ತಟ್ಟೆ ಇಡ್ಲಿ ಸವಿಯುತ್ತಿದ್ದರು, ಭೂತಯ್ಯ ಎಂದೇ ಹೆಸರಾಗಿದ್ದ ಅವರು ಅನಾರೋಗ್ಯ ಹಲವು ದಿನಗಳಿಂದ ಹಾಸಿಗೆ ಇಡಿದಿದ್ದರು. ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಪಟ್ಟಣ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಪುತ್ರ ಟಿ.ಎಂ.ಶಿವಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next