Advertisement

Kunigal: ತಲೆ‌ ಮೇಲೆ ಹಾಲೋ ಬ್ಲಾಕ್ ಇಟ್ಟಿಗೆ ಎತ್ತಿ ಹಾಕಿ ಸ್ನೇಹಿತನ ಕೊಲೆ!

10:39 AM Aug 12, 2024 | Team Udayavani |

ಕುಣಿಗಲ್: ಇಬ್ಬರು ಸ್ನೇಹಿತರ ನಡುವೆ ವೈಮನಸ್ಸು ಉಂಟಾಗಿ ಹಾಲೋ ಬ್ಲಾಕ್ ಇಟ್ಟಿಗೆಯಿಂದ ಓರ್ವನ ತಲೆಗೆ ಜಜ್ಜಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದ ಕೆ.ಆರ್.ಎಸ್ ಅಗ್ರಹಾರದಲ್ಲಿ ಸೋಮವಾರ (ಆ.12) ನಡೆದಿದೆ.

Advertisement

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಂಗರಹಳ್ಳಿ ಗ್ರಾಮ ಹಾಲಿ ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ವಾಸಿ ರವಿ (40) ಕೊಲೆಯಾದ ವ್ಯಕ್ತಿ. ಈತ ಗಾರೆ ಕೆಲಸಗಾರನಾಗಿದ್ದ. ಶಿವಕುಮಾರ್‌ ಕೊಲೆ ಆರೋಪಿ.

ಘಟನೆ ವಿವರ: ರವಿ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಒಂದೇ ಕಡೆ ಗಾರೆ ಕೆಲಸ‌ ಮಾಡುತ್ತಿದ್ದರು. ಭಾನುವಾರ ರವಿ ಗಾರೆ ಕೆಲಸ‌ಕ್ಕೆ ಕುಣಿಗಲ್ ಗೆ ಬಂದಿದ್ದರೆ ಆತನ ಹೆಂಡತಿ ಭಾಗ್ಯ ಅವರು ದೀಕ್ಷಾವಾಟರ್ ಗೆ ಕೆಲಸಕ್ಕೆ ಬಂದಿದ್ದರು. ಭಾಗ್ಯ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹೋಗಿದ್ದಾರೆ. ಆದರೆ ರವಿ ಮನೆಗೆ ಹೋಗದೆ ಶಿವಕುಮಾರ್‌ ಶೆಡ್‌ ಗೆ ಹೋಗಿದ್ದಾನೆ.

ಮಳವಳ್ಳಿಯ ಶಿವಕುಮಾರ್ ಇಲ್ಲಿನ ಕೆಆರ್ ಎಸ್ ಅಗ್ರಹಾರದ ನಾಗರಾಜು ಎಂಬುವರು ಬಳಿ ಕೆಲಸ‌ ಮಾಡುತ್ತಿದ್ದ. ಶೆಡ್ ನಲ್ಲಿ ಇವರಿಬ್ಬರ ನಡುವೆ ರಾತ್ರಿ ಏನು ನಡೆದಿದೆ ಎಂದು ತಿಳಿದು ಬಂದಿಲ್ಲ. ಈ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶಿವಕುಮಾರನು ರವಿಯ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆ ಎತ್ತಿ ಹಾಕಿ ಕೊಲೆ‌ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮೇಸ್ತ್ರಿ ನಾಗರಾಜು ಅವರ ಅಣ್ಣ ರಂಗಸ್ವಾಮಿ ಅವರು ಗೋಡೌನ್ ನಲ್ಲಿ ಇರುವ ಗಾರೆ ಸಾಮಾಗ್ರಿ ತೆಗೆದುಕೊಳ್ಳಲು ಹೊದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆದರೆ,‌ ಕೊಲೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ,

Advertisement

ಈ ಸಂಬಂಧ ಡಿವೈಎಸ್ ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ ಘಟನೆ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next