Advertisement

Kunigal; ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಜಾಗ್ವಾರ್ ಕಾರು

11:25 PM Nov 09, 2023 | Team Udayavani |

ಕುಣಿಗಲ್ : ಜಾಗ್ವಾರ್ ಕಾರಿನ ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಧಗಧಗನೆ ಹೊತ್ತಿ ಉರಿದಘಟನೆ ಕುಣಿಗಲ್ ಪಟ್ಟಣದ ನಕ್ಷತ್ರ ಪ್ಯಾಲೇಸ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಅದೃಷ್ಟವಷಾತ್ ಯಾರಿಗೂ ಗಾಯವಾಗಿಲ್ಲ. ಬೆಂಗಳೂರು ಯಲಹಂಕ ಮೂಲದ ರಾಜಕುಮಾರ್ ಅವರಿಗೆ ಸೇರಿದ ಜಾಗ್ವಾರ್ ಕಾರು ಬೆಂಕಿಗೆ ಅಹುತಿಯಾಗಿದೆ.

Advertisement

ಸಂಬಂಧಿಕರ ಮದುವೆಗೆಂದು ರಾಜಕುಮಾರ್ ಹಾಗೂ ಅವರ ಕುಟುಂಬ ಕಾರಿನಲ್ಲಿ ಬಂದಿದ್ದರು.ಕಾರನ್ನು ಪ್ಯಾಲೇಸ್ ಮುಂಭಾಗದಲ್ಲಿ ನಿಲ್ಲಿಸಿ ಧಾರಾ ಮುಹೂರ್ತಕ್ಕೆ ಹೋಗಿದ್ದರು. ಈ ವೇಳೆ ಕಾರಿನ ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇದಕ್ಕಿದಂತೆ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯ ಹೊಗೆ ಪ್ಯಾಲೇಸ್‌ ಸುತ್ತ ಅವರಿಸಿತ್ತು. ಮದುವೆಗೆ ಬಂದಿದ್ದ ಜನರು ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿ ಗಾಬರಿಗೊಂಡು ಕಲ್ಯಾಣ ಮಂಟಪದಿಂದ ಕೆಲವರು ಹೊರಗೋಡಿ ಬಂದರು. ಮತ್ತೆ ಕೆಲವರು ಕಲ್ಯಾಣ ಮಂಟಪದಲ್ಲೇ ಕುಳಿತು ಜ್ವಾಲೆಯನ್ನು ನೋಡಿ ಆತಂಕಗೊಂಡರು. ಪ್ಯಾಲೇಸ್‌ನ ಅಕ್ಕ ಪಕ್ಕದಲ್ಲಿ ಇದ್ದ ಅಂಗಡಿ ಮಾಲಕರು, ಕೆಎಸ್‌ಆರ್‌ಟಿಸಿ ಡಿಪೋ ಸಿಬಂದಿ ಡಿಪೋ ನಿಂದ ಹೊರ ಬಂದು ಬೆಂಕಿಯನ್ನು ನಂದಿಸಲು ನೀರು ಹಾಕಿದರು. ಆದರೆ ಇದ್ಯಾವುದು ಪ್ರಯೋಜನಕ್ಕೆ ಬಾರದ ಕಾರಣ ಅಗ್ನಿಶಾಮಕ ದಳಕ್ಕೆ ತಿಳಿಸಿದರು.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಶಾಮಕ ದಳ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರಿನ ಮೌಲ್ಯ ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next