Advertisement

Kundapura: ನದಿಗೆ ಹಾರಿ ಯುವಕ ಆತ್ಮಹತ್ಯೆ

09:03 PM Sep 05, 2024 | Team Udayavani |

ಕುಂದಾಪುರ: ಹಳ್ನಾಡು ಗ್ರಾಮದ ಶಿವಪ್ರಸಾದ್‌ ಅವರ ಪುತ್ರ ಸುಪ್ರಜಾ ಶೆಟ್ಟಿ (17) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸುಪ್ರಜಾ ದ್ವಿತೀಯ ಪಿಯುಸಿ ಮುಗಿಸಿ, ಮುಂದೆ ಎಂಜಿನಿಯರಿಂಗ್‌ ಓದಲು ಬೆಂಗಳೂರಿಗೆ ತೆರಳಲು ತಯಾರಿ ನಡೆಸುತ್ತಿದ್ದರು. ಸೆ. 4ರಂದು ಬೆಳಗ್ಗೆ 9ಕ್ಕೆ ಮನೆಯಲ್ಲಿ ತಿಂಡಿ ತಿಂದು, ತೋಟದ ಕಡೆಗೆ ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ತೋಟದ ಸಮೀಪದ ಹೊಳೆ ಬದಿಯಲ್ಲಿ ಸುಪ್ರಜಾ ಅವರ ಚಪ್ಪಲಿ ಕಂಡಿದೆ. ಸೆ.5ರ ಬೆಳಗ್ಗೆ ಹೊಳೆಯಲ್ಲಿ ಸ್ಥಳೀಯರು ಹಾಗೂ ಮುಳುಗು ತಜ್ಞರ ಸಹಾಯದಿಂದ ಹುಡುಕಾಡಿದಾಗ ಸುಪ್ರಜಾ ಮೃತದೇಹ ಪತ್ತೆಯಾಗಿದೆ.

ಉನ್ನತ ವ್ಯಾಸಂಗಕ್ಕೆಂದು ದೂರದೂರಿಗೆ ಹೋಗುವ ಬಗ್ಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಂದೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next