Advertisement

Kundapura ವಾಹನ ಢಿಕ್ಕಿ: ಪಾದಚಾರಿ ಸಾವು

12:27 AM Feb 24, 2024 | Team Udayavani |

ಕುಂದಾಪುರ: ಹಂಗಳೂರು ಗ್ರಾಮದ ಶಬರಿ ಹೊಟೇಲ್‌ ಎದುರಿನ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಅನಂತಯ್ಯ (68) ಅವರು ಗೂಡ್ಸ್‌ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

Advertisement

ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅಬೂಬಕ್ಕರ್‌ ಚಲಾಯಿಸುತ್ತಿದ್ದ ಗೂಡ್ಸ್‌ ವಾಹನ ಢಿಕ್ಕಿ ಹೊಡೆಯಿತು. ಗಾಯಾಳು ಅನಂತಯ್ಯ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದಾಗಿ ತಿಳಿಸಿದರು. ಪ್ರಕರಣ ದಾಖಲಾಗಿದೆ.

ಕೋಳಿ ಅಂಕಕ್ಕೆ ದಾಳಿ
ಕುಂದಾಪುರ: ಕಟ್‌ಬೆಲ್ತೂರು ಗ್ರಾಮದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ಗ್ರಾಮಾಂತರ ಠಾಣೆ ಎಸ್‌ಐ ನೂತನ್‌ ದಾಳಿ ನಡೆಸಿದ್ದಾರೆ.

ನಾಗರಾಜ, ಜನಾರ್ದನ, ಅನಿಲ್‌, ಮನೋಜ ಅವರನ್ನು ವಶಕ್ಕೆ ಪಡೆದಿದ್ದು, 3 ಕೋಳಿ ಹಾಗೂ ನಗದು, ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next