Advertisement

Kundapura ಪತಿಯಿಂದ ಜೀವಬೆದರಿಕೆ: ದೂರು ದಾಖಲು

06:48 PM Mar 27, 2024 | Team Udayavani |

ಕುಂದಾಪುರ: ಕುಂಭಾಶಿ ಗ್ರಾಮದ ನಿವೇದಿತಾ (40) ಅವರು 2005ರಲ್ಲಿ ವಾಸುದೇವ ಅವರನ್ನು ಮದುವೆಯಾಗಿದ್ದು ಈಗ ನಿರ್ಲಕ್ಷ್ಯ ಮಾಡಿ ಜೀವಬೆದರಿಕೆ ಹಾಕುತ್ತಿದ್ದಾರೆ.

Advertisement

ಚಿನ್ನಾಭರಣ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ. 2020ರಲ್ಲಿ ವಾಸುದೇವ ಮುಂಬಯಿಯಲ್ಲಿ ಪ್ರಿಯಾ ಮೋರೆ ಜತೆ ಸೇರಿ ಹೊಟೇಲ್‌ ವ್ಯವಹಾರ ಆರಂಭಿಸಿದ್ದು ನಿವೇದಿತಾರನ್ನು ನಿರ್ಲಕ್ಷಿಸಲು ಆರಂಭಿಸಿದ್ದರು.

ಹೊಟೇಲ್‌ ವ್ಯವಹಾರದಲ್ಲಿ ನಷ್ಟ ಉಂಟಾದ ಬಳಿಕ ಉಡುಪಿ ಸಂತೆಕಟ್ಟೆಯಲ್ಲಿ ವಾಸವಿದ್ದು ಅಲ್ಲಿಯೂ ನಿವೇದಿತಾಗೆ ಚಿತ್ರಹಿಂಸೆ ನೀಡಿ 2023ರಲ್ಲಿ ಮನೆಯಿಂದ ಹೊರಗೆ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ.

140 ಗ್ರಾಂ ಚಿನ್ನಾಭರಣಗಳನ್ನು ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next