Advertisement

Kundapura; ಯುವಕನ ಮೃತದೇಹ ಬೀಚ್‌ನಲ್ಲಿ ಪತ್ತೆ

09:58 PM Feb 17, 2024 | Team Udayavani |

ಕುಂದಾಪುರ: ಕನಕಪುರದ ಬ್ಯಾಂಕ್‌ವೊಂದರ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದ ಅಮಾಸೆಬೈಲು ಸಮೀಪದ ರಟ್ಟಾಡಿ ಗ್ರಾಮದ ನಿವಾಸಿ ಪ್ರಸಾದ್‌ ಕೆ. (24) ಅವರ ಮೃತದೇಹ ಫೆ. 17ರಂದು ಕೋಡಿಯ ಚಕ್ರೇಶ್ವರಿ ದೇವಸ್ಥಾನ ಎದುರಿನ ಸಮುದ್ರದ ದಡದಲ್ಲಿ ಪತ್ತೆಯಾಗಿದೆ.

Advertisement

ರಾಮನಗರ ಜಿಲ್ಲೆಯ ಕನಕಪುರ ಶಾಖೆಯಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಸಾದ್‌ ಅವರಿಗೆ ಫೆ. 16ರಂದು ತಾಯಿ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ಬಳಿಕ ಬ್ಯಾಂಕ್‌ ಮ್ಯಾನೇಜರ್‌ಗೆ ಕರೆ ಮಾಡಿದಾಗ ಪ್ರಸಾದ್‌ ಬೆಳಗ್ಗೆ 11 ಗಂಟೆಯವರೆಗೆ ಕೆಲಸದಲ್ಲಿದ್ದು, ಅನಂತರ ಬೇರೆ ಬ್ರಾಂಚ್‌ ವಿಸಿಟ್‌ ಮಾಡಲಿಕ್ಕಿದೆ ಎಂದು ಹೇಳಿ ಹೋಗಿರುವುದಾಗಿ ತಿಳಿಸಿದ್ದಾರೆ.

ಫೆ. 17ರಂದು ಬೆಳಗ್ಗೆ ಕೋಡಿ ಸಮೀಪದ ಸಮುದ್ರದ ದಡದಲ್ಲಿ ಪ್ರಸಾದ್‌ ಅವರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಆದರೆ ಸಾವಿನ ಹಿಂದಿರುವ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಪ್ರಸಾದ್‌ ಅವರ ತಂದೆ ರಟ್ಟಾಡಿಯ ಕೃಷ್ಣ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next