Advertisement

Kundapura; ಹದಗೆಟ್ಟ ನೆಂಪು-ನೇರಳಕಟ್ಟೆ ರಾಜ್ಯ ಹೆದ್ದಾರಿ

05:53 PM Oct 20, 2023 | Team Udayavani |

ಕುಂದಾಪುರ: ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ ಹಾದುಹೋಗುವ ನೆಂಪುವಿನಿಂದ ನೇರಳಕಟ್ಟೆಯವರೆಗಿನ ರಸ್ತೆಯ ಡಾಮರೆಲ್ಲ ಅಲ್ಲಲ್ಲಿ ಹಲವೆಡೆಗಳಲ್ಲಿ ಎದ್ದು ಹೋಗಿದ್ದಲ್ಲದೆ, ಕೆಲವೆಡೆಗಳಲ್ಲಿ ಹೊಂಡ-ಗುಂಡಿಗಳಿವೆ. ಹದಗೆಟ್ಟ ಈ ರಸ್ತೆಯಿಂದಾಗಿ ನಿತ್ಯ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.

Advertisement

ನೆಂಪುವಿನಿಂದ ನೇರಳಕಟ್ಟೆಯವರೆಗಿನ ಸುಮಾರು 4-5 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ
ವ್ಯವಸ್ಥೆಯಿಲ್ಲದೆ, ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಇದರಿಂದ ರಸ್ತೆಯ ಬಹುತೇಕ ಕಡೆಗಳಲ್ಲಿ ಡಾಮರೆಲ್ಲ ಎದ್ದು ಹೋಗಿದೆ. ಇದಲ್ಲದೆ ಕೆಲವೆಡೆಯಂತೂ ಬೃಹತ್‌ ಹೊಂಡಗಳು ರಸ್ತೆ ಮಧ್ಯೆಯಿದ್ದು, ದ್ವಿಚಕ್ರ ಸವಾರರಂತೂ ಪ್ರಯಾಸಪಡುವಂತಾಗಿದೆ.

ಪ್ರಮುಖ ರಸ್ತೆ
ಪ್ರಮುಖವಾಗಿ ಇದು ಪ್ರಸಿದ್ಧ ಯಾತ್ರ ಸ್ಥಳಗಳಾದ ಕೊಲ್ಲೂರು ಹಾಗೂ ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಇದಲ್ಲದೆ ವಂಡ್ಸೆ, ನೆಂಪುವಿನಿಂದ ನೇರಳಕಟ್ಟೆ, ಅಂಪಾರಿಗೆ, ಸೌಕೂರು, ಕಾವ್ರಾಡಿಗೆ ತೆರಳಲು ಜನ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.

ಕೊಲ್ಲೂರಿನಿಂದ ನೇರಳಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ, ಕೊಲ್ಲೂರಿನಿಂದ ಹಾಲಾಡಿ, ಹೆಬ್ರಿಗೆ ಇದೇ ಮಾರ್ಗವಾಗಿ ಅನೇಕ ಬಸ್‌ ಗಳು ಸಂಚರಿಸುತ್ತವೆ. ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಾಗಿದೆ.

ದುರಸ್ತಿಗೆ ಆಗ್ರಹ
ಹೊಂಡಮಯ ರಸ್ತೆಯಿಂದಾಗಿ ಬೈಕ್‌, ಇನ್ನಿತರ ದ್ವಿಚಕ್ರ ವಾಹನಗಳಲ್ಲಿ ಅಂತೂ ಸಂಚರಿಸಲು ಸಾಧ್ಯವಿಲ್ಲ. ಜೀವ ಕೈಯಲ್ಲಿಯೇ ಹಿಡಿದುಕೊಂಡು ಸಂಚರಿಸುವಂತಾಗಿದೆ. ಅನೇಕ ಸಮಯದಿಂದ ಈ ರಸ್ತೆ ಅಭಿವೃದ್ಧಿಯಾಗದೇ ಬಾಕಿ ಉಳಿದಿದ್ದು, ಆದಷ್ಟು ಬೇಗ ಈ ರಸ್ತೆಯ ದುರಸ್ತಿ ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next