Advertisement

ಕುಂದಾಪುರ: ಆ್ಯಂಬುಲೆನ್ಸ್‌ –ಲಾರಿ ನಡುವೆ ಅಪಘಾತ…  ಮೂವರಿಗೆ ಗಾಯ

08:31 PM Feb 15, 2023 | Team Udayavani |

ಕುಂದಾಪುರ: ಆ್ಯಂಬುಲೆನ್ಸ್‌ ಹಾಗೂ ಲಾರಿ ಢಿಕ್ಕಿಯಾಗಿ, ಆ್ಯಂಬುಲೆನ್ಸ್‌ನಲ್ಲಿದ್ದ ಮೂವರು ಗಾಯಗೊಂಡ ಘಟನೆ ಫೆ. 15ರ ಬೆಳಗ್ಗೆ ಬೀಜಾಡಿಯ ರಾ.ಹೆ. 66ರಲ್ಲಿ ಸಂಭವಿಸಿದೆ.

Advertisement

ಆ್ಯಂಬುಲೆನ್ಸ್‌ನಲ್ಲಿದ್ದ ಸಿದ್ದಯ್ಯ ಹೆಗ್ಡೆ, ಉದಯ ಹೆಗ್ಡೆ ಹಾಗೂ ಸುಶೀಲಾ ಶೆಟ್ಟಿ ಗಾಯಗೊಂಡಿದ್ದು, ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರ್ಗಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಶಿವದಾಸ್‌ ಚಲಾಯಿಸುತ್ತಿದ್ದ ಲಾರಿ ಮತ್ತು ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ ಸಂಭವಿಸಿತ್ತು.

ಆ್ಯಂಬುಲೆನ್ಸ್‌ನಲ್ಲಿದ್ದ ದಿನೇಶ್‌ ಶೆಟ್ಟಿ ಅವರು ನೀಡಿದ ದೂರಿನಂತೆ ಚಾಲಕ ಕೆ.ಎಸ್‌. ಅಯೂಬ್‌ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜನವರಿಯಲ್ಲಿ ರಫ್ತು ಭಾರೀ ಕುಸಿತ: ಸತತ 2ನೇ ತಿಂಗಳು ರಫ್ತು ಪ್ರಮಾಣದಲ್ಲಿ ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next