Advertisement

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

10:06 PM Jul 05, 2024 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕಂಟೈನರ್‌ ಲಾರಿಯೊಂದು ಹಠಾತ್‌ ಆಲೂರು ಕಡೆಯ ರಸ್ತೆಗೆ ತಿರುಗಿದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಕ್ಕರೆ ತುಂಬಿದ ಬೃಹತ್‌ ಲಾರಿಯೊಂದು ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಸಂಭವಿಸಿದೆ.

Advertisement

ಲಾರಿ ಚಾಲಕ ವೆಂಕಪ್ಪ ಎಸ್‌. ಹಬಲಕಟ್ಟಿ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದಿಂದ ಕೇರಳಕ್ಕೆ ಸಕ್ಕರೆ ಚೀಲಗಳ‌ನ್ನು ಸಾಗಿಸುತ್ತಿದ್ದ ಲಾರಿ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕಂಟೈನರ್‌ ಲಾರಿ ಚಾಲಕ ಹಠಾತ್‌ ಬೇರೆ ಕಡೆಗೆ ವಾಹನವನ್ನು ತಿರುಗಿಸಿದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಅಪಘಾತದಿಂದ ಲಾರಿಯ ಮುಂಭಾಗ ಜಖಂಗೊಂಡಿದೆ. ಲಾರಿಯಲ್ಲಿದ್ದ ಸುಮಾರು 650ರಷ್ಟು ಸಕ್ಕರೆ ಬ್ಯಾಗ್‌ಗಳಲ್ಲಿ 100 ಚೀಲಗಳಿಗೆ ಹಾನಿಯಾಗಿದೆ.

ಲಾರಿಯ ಮಾಲಕ ಬೆಳಗಾವಿಯ ಎಚ್‌. ಎಲ್‌. ಬಂಡಿವಡ್ಡರ್‌ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next