Advertisement

ಕುಂದಾಪುರ : ಕಂಟ್ರೋಲ್‌ ರೂಂಗೆ ಸಂಸದೆ ಶೋಭಾ ಭೇಟಿ

11:21 PM May 22, 2020 | Sriram |

ಕುಂದಾಪುರ: ಇಲ್ಲಿನ ಪುರಸಭೆ ಕಟ್ಟಡದ ಮೊದಲ ಮಹಡಿಯಲ್ಲಿ ಶಾಸಕ ಶ್ರೀನಿವಾಸ ಶೆಟ್ಟರ ಸೂಚನೆಯಂತೆ ಆರಂಭವಾಗಿರುವ ಕುಂದಾಪುರ ವಿಧಾನಸಭೆ ಕ್ಷೇತ್ರದ ಕಂಟ್ರೋಲ್‌ ರೂಂಗೆ ಶುಕ್ರವಾರ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.

Advertisement

ಈ ವೇಳೆ ಸಂಸದರು ಈ ಕಂಟ್ರೋಲ್‌ ರೂಂಗೆ ಬರುತ್ತಿರುವ ಕರೆಗಳ ಬಗ್ಗೆ, ಯಾವ ತರಹದ ದೂರುಗಳು ಬರುತ್ತವೆ. ಎಲ್ಲಿಂದೆಲ್ಲ ಕರೆಗಳು ಬರುತ್ತಿವೆ ಎನ್ನುವುದರ ಬಗ್ಗೆ ಮಾಹಿತಿ ಪಡೆದರು.

ಕ್ವಾರಂಟೈನ್‌ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿ, ದೂರು ಇತ್ಯಾದಿಗಳನ್ನು ಈ ಕಂಟ್ರೋಲ್‌ ರೂಂಗೆ ಕರೆ ಮಾಡುವ ಮೂಲಕ ನೀಡಬಹುದು. ದೂರು ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುತ್ತಿದೆ. ಈವರೆಗೆ 300 ಕ್ಕೂ ಅಧಿಕ ಕರೆಗಳು ಬಂದಿವೆ.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಉಪಾಧ್ಯಕ್ಷೆ ಗುಣರತ್ನ, ಪುರಸಭೆ ಸದಸ್ಯರಾದ ಮೋಹನ್‌ ದಾಸ್‌ ಶೆಣೈ, ಸಂತೋಷ್‌ ಕುಮಾರ್‌ ಶೆಟ್ಟಿ, ಅಶ್ವಿ‌ನಿ ಪ್ರದೀಪ್‌, ಶ್ವೇತಾ ಸಂತೋಷ್‌, ಮುಖಂಡರಾದ ಕಿರಣ್‌ ಕೊಡ್ಗಿ, ಸುನೀಲ್‌ ಕುಮಾರ್‌ ಶೆಟ್ಟಿ ಹೇರಿಕುದ್ರು, ದಿವಾಕರ ಕಡ್ಗಿ, ಅರುಣ್‌ ಬಾಣಾ, ಸುಧೀರ್‌ ಮೊದಲಾದವರು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next