Advertisement

Kundapura: ಮರಳು ಅಕ್ರಮ ಸಾಗಾಟ ಪತ್ತೆ

02:13 AM Sep 20, 2024 | Team Udayavani |

ಕುಂದಾಪುರ: ಬೀಜಾಡಿ ಗ್ರಾಮದ ಮೀನುಗಾರಿಕೆ ರಸ್ತೆಯಲ್ಲಿ ಗುರುವಾರ (ಸೆ. 19) ರಂದು ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ರಾಘವೇಂದ್ರ ಹಾಗೂ ಸಿಬಂದಿ ಮೌನೇಶ್‌ ಅವರು ಟಿಪ್ಪರ್‌ ಮೂಲಕ ಮರಳು ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

Advertisement

ಟಿಪ್ಪರ್‌ನ ಮಾಲಕ ಗೌತಮ್‌ ಹಾಗೂ ಚಾಲಕ ಪುರುಷೋತ್ತಮ್‌ ಅವರು ಗಿಳಿಯಾರು ಗ್ರಾಮದ ತೋಡಿನಿಂದ ಯಾವುದೇ ಪರವಾನಿಗೆಯಿಲ್ಲದೆ, ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಮರಳು ಹಾಗೂ ಟಿಪ್ಪರ್‌ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಹಿತ ಟಿಪ್ಪರ್‌ ವಶ
ಹಿರಿಯಡಕ: ಹಿರಿಯಡಕ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಜಾರು ಎಂಬಲ್ಲಿ ಪರವಾನಿಗೆ ಇಲ್ಲದೆ ಈಚರ್‌ ಟಿಪ್ಪರ್‌ನಲ್ಲಿ ಸಾಗಿಸುತ್ತಿದ್ದ ಮರಳನ್ನು ವಾಹನ ಸಹಿತ ವಶಪಡಿಸಿಕೊಳ್ಳಲಾಗಿದೆ. ವಾಹನದಲ್ಲಿ ಸುಮಾರು 10 ಸಾ.ರೂ. ಮೌಲ್ಯದ ಎರಡು ಯೂನಿಟ್‌ ಮರಳು ಇತ್ತು. ಈ ಸಂಬಂಧ ಪ್ರಮೋದ್‌ ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೇಳೂರು: ಕಲ್ಲು ಅಕ್ರಮ ಸಾಗಾಟ
ಕೋಟ: ಆಕ್ರಮವಾಗಿ ಶಿಲೆ ಕಲ್ಲನ್ನು ಸಾಗಿಸುತ್ತಿದ್ದ ಲಾರಿಯನ್ನು ಕೋಟ ಪೊಲೀಸರು ಬೇಳೂರಿನಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಾಲಕ ಶೇಖರ್‌ ಬೇಳೂರು ಗ್ರಾಮದಲ್ಲಿ ಸರಕಾರಿ ಜಾಗದಿಂದ ಶಿಲೆ ಕಲ್ಲುಗಳನ್ನು ಕಳವು ಮಾಡಿ ಮಾರಾಟಕ್ಕಾಗಿ ಸಾಗಿಸುತ್ತಿದ್ದುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next