Advertisement

ಮುಂದಿನ ಋತುವಿನ ಸಿದ್ಧತೆಯಲ್ಲಿ ಸೇವಂತಿಗೆ ಕೃಷಿಕರು

09:56 PM Apr 19, 2020 | Sriram |

ಹೆಮ್ಮಾಡಿ: ಕೋವಿಡ್ 19 ಲಾಕ್‌ಡೌನ್‌ ಆರಂಭಕ್ಕೂ ಮೊದಲೇ ಹೆಮ್ಮಾಡಿ ಸೇವಂತಿಗೆ ಸೀಸನ್‌ ಮುಗಿಯುತ್ತ ಬಂದಿದ್ದು, ಬೆರಳೆಣಿಕೆಯಷ್ಟು ಮಂದಿ ಬೆಳೆಗಾರರಿಗೆ ಮಾತ್ರ ಕೊನೆಯಲ್ಲಿ ಸ್ವಲ್ಪ ಮಟ್ಟಿಗೆ ಇದರಿಂದ ತೊಂದರೆ ಉಂಟಾಗಿತ್ತು. ಈಗಾಗಲೇ ಸೇವಂತಿಗೆ ಸೀಸನ್‌ ಮುಗಿದಿದ್ದು, ಮುಂದಿನ ಋತುವಿಗಾಗಿ ಗಿಡಗಳನ್ನು ಸುಟ್ಟು, ಆ ಗದ್ದೆಗಳಲ್ಲಿ ಸುಡುಮಣ್ಣು ತಯಾರಿಯಲ್ಲಿ ಕೃಷಿಕರು ನಿರತರಾಗಿದ್ದಾರೆ.

Advertisement

ಸಾಮಾನ್ಯವಾಗಿ ಹೆಮ್ಮಾಡಿ ಸೇವಂತಿಗೆ ಸೀಸನ್‌ ಎಪ್ರಿಲ್‌ ಆರಂಭದವರೆಗೆ ಇರುತ್ತದೆ. ಆದರೆ ಈ ಬಾರಿ ಬಹುತೇಕ ಬೇಗನೆ ಮುಗಿದಿದ್ದು, ಕೋವಿಡ್ 19 ಲಾಕ್‌ಡೌನ್‌ನಿಂದ 4-5 ಮಂದಿ ಕೃಷಿಕರಿಗೆ ಮಾತ್ರ ಸ್ವಲ್ಪ ತೊಂದರೆಯಾಗಿತ್ತು. ಮುಂದಿನ ಋತು ಆಗಸ್ಟ್‌ನಲ್ಲಿ ಆರಂಭವಾದರೂ, ಸುಡುಮಣ್ಣು ತಯಾರಿಯೆಲ್ಲ ಈಗಿನಿಂದಲೇ ಆರಂಭವಾಗುತ್ತದೆ ಎನ್ನುವುದಾಗಿ ಸೇವಂತಿ ಬೆಳೆಗಾರರಾದ ರಾಜು ಹೇಳಿದರು.

ನಷ್ಟ ಪರಿಹಾರ ನೀಡಿ
ಈ ಬಾರಿ ಮೋಡ, ಅಕಾಲಿಕ ಮಳೆ, ಚಳಿ ಕಡಿಮೆ ಇದ್ದ ಕಾರಣ ಸೇವಂತಿಗೆ ಸೀಸನ್‌ ಅಷ್ಟೇನು ಫಲಪ್ರದವಾಗಿರಲಿಲ್ಲ. ಹೆಚ್ಚಿನ ಬೆಳೆಗಾರರಿಗೆ ನಷ್ಟವೇ ಆಗಿದೆ. ಸರಕಾರ ಸೇವಂತಿಗೆ ಬೆಳೆಗಾರರಿಗೂ ಕೂಡ ನಷ್ಟ ಪರಿಹಾರ ನೀಡಬೇಕು ಎಂದು ಹೆಮ್ಮಾಡಿ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next