Advertisement

ಕುಂದಾಪುರ: ಅನಾರೋಗ್ಯಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

12:27 AM Jan 12, 2023 | Team Udayavani |

ಕುಂದಾಪುರ: ಕುಂಭಾಶಿ ಗ್ರಾಮದ ದೇವಾಡಿಗರ ಬೆಟ್ಟುವಿನ ನಿವಾಸಿ ಎಚ್‌. ನಾಗ ಮೊಗೇರ ಅವರ ಪತ್ನಿ ಗಿರಿಜಾ (67) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 10ರ ರಾತ್ರಿ 12 ಗಂಟೆಯಿಂದ ಜ. 11ರ ಬೆಳಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ಸಂಭವಿಸಿದೆ.

Advertisement

ಕಳೆದ 2-3 ತಿಂಗಳಿನಿಂದ ವಿಪರೀತ ಹೊಟ್ಟೆ ಉರಿ ಹಾಗೂ ನಿದ್ರಾ ಹೀನತೆಯಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಸಹ ಕೊಡಿಸಲಾಗಿತ್ತು. ಅನಾರೋಗ್ಯದಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next