Advertisement

ಭರದಿಂದ ನಡೆಯುತ್ತಿದೆ ಕಾಮಗಾರಿ

10:46 PM May 29, 2020 | Sriram |

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಫ್ಲೈಓವರ್‌ ಕಾಮಗಾರಿ ಮೂರನೇ ಹಂತದ ಲಾಕ್‌ಡೌನ್‌ ಬಳಿಕ ಮುಂದುವರಿಯುತ್ತಿದ್ದು, ಭರದಿಂದ ನಡೆಯುತ್ತಿದೆ.

Advertisement

ಕೆಎಸ್‌ಆರ್‌ಟಿಸಿ ಎದುರು ಸರ್ವಿಸ್‌ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಫ್ಲೈಓವರ್‌ನ ಒಂದು ಬದಿ ಸಂಪರ್ಕ ರಸ್ತೆ ಪೂರ್ಣ ವಾಗಿದ್ದು, ಡಾಮರು ಹಾಕಲಾಗಿದೆ. ಇನ್ನೊಂದು ಬದಿ ಸಂಪರ್ಕ ರಸ್ತೆ ಆಗಿಲ್ಲ. ಬಸ್ರೂರು ಮೂರುಕೈ ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ಪ್ರಾರಂಭಗೊಳ್ಳಲು ಸಹಾಯಕ ಕಮಿಷನರ್‌ ಡಿಸಿ ಅವರ ಬಳಿ ಮನವಿ ಮಾಡಿದ್ದರು. ಅನಂತರದ ದಿನಗಳಲ್ಲಿ ಸರಕಾರವೇ ಸರಕಾರಿ ಕಾಮ ಗಾರಿ ನಡೆಸಲು ಅನುಮತಿ ನೀಡಿತ್ತು. ಫ್ಲೈಓವರ್‌ ಕಾಮಗಾರಿ ಎಪ್ರಿಲ್‌ ಮೊದಲ ವಾರದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕಿತ್ತು. ಲಾಕ್‌ಡೌನ್‌ ಕಾರಣದಿಂದ ಬಾಕಿಯಾಗಿತ್ತು.

ಫ್ಲೈಓವರ್‌ ಪೂರ್ಣವಾದ ಬಳಿಕ ಎಲ್‌ಐಸಿ ಕಚೇರಿ, ಮೆಸ್ಕಾಂ ಕಚೇರಿ, ಎಎಸ್‌ಪಿ ಕಚೇರಿ, ಲೋಕೋಪಯೋಗಿ ಇಲಾಖೆ ಮೊದಲಾದ ಕಚೇರಿಗಳು ಇರು ವಲ್ಲಿಗೆ ಹೋಗಲು ಸರ್ವಿಸ್‌ ರಸ್ತೆಗೆ ಸಂಪರ್ಕ ದೊರೆಯುವುದು ಸಾಧ್ಯವೇ ಎಂದು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇಲ್ಲಿ ಹೆದ್ದಾರಿಯಲ್ಲಿ ತೆರವು ರಸ್ತೆ ಇದ್ದರೂ ಹೆದ್ದಾರಿ ಅಡ್ಡದಾಟಲು ಅವಕಾಶ ನೀಡುವ ಸಾಧ್ಯತೆ ಕಡಿಮೆ. ಸಾಧ್ಯ ಇಲ್ಲದಿದ್ದರೆ ಶಾಸ್ತ್ರಿ ಸರ್ಕಲ್‌ನಿಂದ ಬಸ್ರೂರು ಮೂರು ಕೈ ಮೂಲಕ ಸುತ್ತಿ ಬರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next