Advertisement

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

08:49 PM May 28, 2024 | Team Udayavani |

ಕುಂದಾಪುರ: ಹೆಮ್ಮಾಡಿ ಜಂಕ್ಷನ್‌ನಲ್ಲಿ ಚಾಮರಾಜನಗರದ ಲೋಗನಾಥನ್‌ (21) ಅವರು ಚಲಾಯಿಸುತ್ತಿದ್ದ ಕಾರಿಗೆ ವಿಕಾಸ ಅವರ ಕಾರು ಢಿಕ್ಕಿಯಾಗಿದೆ.

Advertisement

ಪರಿಣಾಮ ಲೋಗನಾಥನ್‌ ಅವರ ಕಾರು ನಿಯಂತ್ರಣ ತಪ್ಪಿ ಅಂಗಡಿಗೆ ಢಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಸೆಂಗೋಟೆಯೆನ, ಪಳನಿಸ್ವಾಮಿ ಅವರಿಗೆ, ಅಪಘಾತಪಡಿಸಿದ ಕಾರಿನ ಚಾಲಕನಿಗೆ ಗಾಯವಾಗಿದೆ.

ಕುಂದಾಪುರ ಸರಕಾರಿ ಆಸ್ಪತ್ರೆಗೆ ಗಾಯಾಳುಗಳು ದಾಖಲಾಗಿದ್ದು ಅಪಘಾತದಿಂದ ಎರಡೂ ಕಾರು, ಅಂಗಡಿಯ ಪ್ರಿಜ್‌, ಶಟರ್‌ ಹಾಗೂ ಇತರ ವಸ್ತುಗಳು ಜಖಂಗೊಂಡಿದೆ.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next