Advertisement

Byndoor: ಗೋ ಕಳವು ಪ್ರಕರಣ: ಇಬ್ಬರ ಸೆರೆ, ಕಾರುಗಳು ವಶಕ್ಕೆ

12:01 AM Jun 26, 2024 | Team Udayavani |

ಬೈಂದೂರು: ಬೈಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಶಿರೂರು ಗ್ರಾಮದ ಹೊಟೇಲೊಂದರ ಎದುರುಗಡೆಯ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕುಂದಾಪುರದ ಕೋಡಿ ನಿವಾಸಿಗಳಾದ ಅಬ್ದುಲ್‌ ಸಮಾದ್‌ (27) ಮತ್ತು ಅಬ್ದುಲ್‌ ರೆಹಮಾನ್‌ (25)ನನ್ನು ಕೋಟೇಶ್ವರ-ಹಾಲಾಡಿ ರಸ್ತೆಯ ಬಳಿ ವಶಕ್ಕೆ ಪಡೆಯಲಾಯಿತು. ಆರೋಪಿತರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು, ಮೊಬೈಲ್‌, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರುಗಳ ಅಂದಾಜು ಮೌಲ್ಯ 9 ಲಕ್ಷ ರೂಪಾಯಿ ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಅರುಣ್‌ ಕೆ. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಎಸ್‌.ಟಿ. ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ ನಿರ್ದೇಶನದಲ್ಲಿ ಬೈಂದೂರು ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಠಾಣಾಧಿಕಾರಿ ತಿಮ್ಮೇಶ್‌ ಬಿ.ಎನ್‌. ತಂಡವನ್ನು ರಚಿಸಿ ಜಿಲ್ಲಾ ಸಿ.ಡಿ.ಆರ್‌. ವಿಭಾಗದ ತಾಂತ್ರಿಕ ಸಿಬಂದಿ ಸಹಕಾರದಲ್ಲಿ, ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬಂದಿ ಪ್ರಿನ್ಸ್‌ ಕೆ.ಜೆ., ಸುಜಿತ್‌ ಕುಮಾರ್‌, ಮಾಳಪ್ಪ ದೇಸಾಯಿ, ನವೀನ್‌ ಕುಮಾರ್‌, ಸೂರ ನಾಯ್ಕ, ಚಂದ್ರ ಹಾಗೂ ಜಿಲ್ಲಾ ಸಿ.ಡಿ.ಆರ್‌. ವಿಭಾಗದ ತಾಂತ್ರಿಕ ಸಿಬಂದಿ ದಿನೇಶ್‌ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next