Advertisement

Kundapura: ಪೆಟ್ರೋಲ್‌ ಹಾಕಿಸಿ ಹಲ್ಲೆ: ಪ್ರಕರಣ ದಾಖಲು

07:28 PM Sep 17, 2024 | Team Udayavani |

ಕುಂದಾಪುರ: ತನ್ನ ವಾಹನಕ್ಕೆ ಪೆಟ್ರೋಲ್‌ ಹಾಕಿಸಿಕೊಂಡು ನಂತರ ಹಣ ಕೇಳಿದಾಗ ಪೆಟ್ರೋಲ್‌ ಬಂಕ್‌ ನ ಸೇಲ್ಸ್ ಮ್ಯಾನ್‌ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದಂತಹ ಘಟನೆ ನಡೆದಿದೆ.

Advertisement

ಕರ್ಕುಂಜೆ ಗ್ರಾಮದ ನೆಂಪು ಸೌಪರ್ಣಿಕಾ ಪೆಟ್ರೋಲ್‌ ಬಂಕ್‌ನಲ್ಲಿ ಸೇಲ್ಸ್‌ಮನ್‌ ಆಗಿ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಕೆಂಚಪ್ಪ (20) ಅವರಿಗೆ ರಾಘವೇಂದ್ರ, ಶಬರೀಶ ಅವರು ಬೈಕ್‌ಗೆ 100 ರೂ. ಪೆಟ್ರೋಲ್‌ ಹಾಕಿಸಿ, ಹಣ ಕೇಳಿದಾಗ ಹಲ್ಲೆ ಮಾಡಿ ಬೆದರಿಕೆ ಹಾಕಿ ಹೋಗಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next