Advertisement

“ಏಕ್‌ ಮಿನಿಟ್‌ ಕಾ’ಪೊಲೀಸ್‌ ಆದ ಕುಂದಾಪುರ ಎಸಿ ಪುತ್ರ

09:29 PM Jan 26, 2020 | Sriram |

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರ ಪುತ್ರ 8ರ ಹರೆಯದ ಶ್ರೀ ಹರ್ಷ ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್‌ ಅವರ ಪೊಲೀಸ್‌ ಕ್ಯಾಪ್‌ ತೊಟ್ಟು, ಕೈಯಲ್ಲಿ ಲಾಠಿ (ದಂಡ) ಹಿಡಿದು ಛೋಟಾ ಪೊಲೀಸ್‌ ಆಗಿ ಸಂಭ್ರಮಿಸಿದರು. 

Advertisement

ತನ್ನ ತಂದೆಯೊಂದಿಗೆ ಬಂದಿದ್ದ ಶ್ರೀ ಹರ್ಷ ಗಣರಾಜ್ಯೋತ್ಸವ ಪರೇಡ್‌ ಮುಗಿದ ಬಳಿಕ ಅಲ್ಲಿಯೇ ಇದ್ದ ಎಎಸ್ಪಿ ಹರಿರಾಂ ಶಂಕರ್‌ ಅವರನ್ನು ಕಂಡು ಕೈಕುಲುಕಿ ಮಾತನಾಡಿದ್ದು, ಟೋಪಿ ಧರಿಸುವ ಇಂಗಿತ ವ್ಯಕ್ತಪಡಿಸಿದ್ದ.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಎಸ್ಪಿ ಹರಿರಾಂ ಶಂಕರ್‌ ಅವರು ತನ್ನ ಪೊಲೀಸ್‌ ಕ್ಯಾಪ್‌ ಹಾಗೂ ಲಾಠಿ (ಪೊಲೀಸ್‌ ಸ್ಟಿಕ್‌) ನೀಡಿ ಆತನ ಜತೆ ಫೋಟೋ ತೆಗೆಸಿಕೊಂಡರು.ಈ ಬಗ್ಗೆ ಶ್ರೀ ಹರ್ಷನೊಂದಿಗೆ ಮಾತನಾಡಿದಾಗ ನಾನು ಕೂಡ ಚೆನ್ನಾಗಿ ಓದಿ ತಂದೆಯಂತೆ ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಮನದಾಸೆಯನ್ನು ವ್ಯಕ್ತಪಡಿಸಿದ್ದಾನೆ .

Advertisement

Udayavani is now on Telegram. Click here to join our channel and stay updated with the latest news.

Next