Advertisement

Kundapura: ಆಜ್ರಿಯ ಯುವಕನನ್ನು ವರಿಸಿದ ಜರ್ಮನಿ ಯುವತಿ

09:59 AM Jan 06, 2024 | Team Udayavani |

ಸಿದ್ದಾಪುರ: ಕುಂದಾಪುರದ ಆಜ್ರಿಯ ಯುವಕ ಮತ್ತು ಜರ್ಮನಿಯ ಯುವತಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಜ. 1ರಂದು ಕಾಲಿರಿಸಿದರು.

Advertisement

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್‌ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್‌ ಮತ್ತು ಪೀಟರ್‌ ಶ್ರೂಆರ್‌ ದಂಪತಿಯ ಪುತ್ರಿ ಕಾರಿನ್‌ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ. ಎರಡೂ ಕುಟುಂಬಗಳು ಮದುವೆಗೆ ಸಾಕ್ಷಿಯಾದವು.

ನಿವೃತ್ತ ಸೇನಾಧಿಕಾರಿಯಾದ ಪಂಜು ಪೂಜಾರಿ ಅವರ ಪುತ್ರ ಚಂದನ್‌ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್‌ ಅವರೊಂದಿಗೆ ಪ್ರೇಮಾಂಕುರವಾಗಿತ್ತು.

ಇಬ್ಬರು ತಮ್ಮ ಪ್ರೇಮಾಂಕುರದ ಬಗ್ಗೆ ತಮ್ಮ ತಂದೆ ತಾಯಿಯೊಂದಿಗೆ ಚರ್ಚಿಸಿದರು. ಈ ಮದುವೆಗೆ ಎರಡು ಕುಟುಂಬಗಳು ಪರಸ್ಪರ ಚರ್ಚಿಸಿ, ಒಪ್ಪಿಗೆ ಸೂಚಿಸಿದರು. ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ನವ ಜೋಡಿಗಳು ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಎರಡು ಕಡೆಯ ಬಂಧು-ಮಿತ್ರರು, ಹಿತೈಷಿಗಳು ಪಾಲ್ಗೊಂಡು ನವಜೋಡಿಗಳಿಗೆ ಶುಭಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next