Advertisement

ಕುಂದಾಪುರ: ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ

05:06 PM Jan 21, 2023 | Team Udayavani |

ಕುಂದಾಪುರ: ಇಲ್ಲಿನ ಲಾಡ್ಜ್ ವೊಂದರಲ್ಲಿ ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿಯ ನಿವಾಸಿ ಸುನೀಲ್‌ ಕುಮಾರ್‌ (39) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.20 ರಂದು ಬೆಳಕಿಗೆ ಬಂದಿದೆ.

Advertisement

ಸುನೀಲ್‌ ಕುಮಾರ್‌ ಅವರು ಜ.17 ಕ್ಕೆ ನಾಡಗುಡ್ಡೆಯಂಗಡಿಯ ವಾರ್ಷಿಕ ಹಬ್ಬಕ್ಕೆಂದು ಕುಂದಾಪುರಕ್ಕೆ ಬಂದಿದ್ದು, ಆ ದಿನ ಇಲ್ಲಿನ ಲಾಡ್ಜ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.

ಜ.20 ರಂದು ರೂಮ್‌ನ ಬಾಗಿಲು ತೆರೆಯದೇ ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ, ದುರ್ವಾಸನೆ ಬರುತ್ತಿತ್ತು. ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಜ.17 ರಿಂದ ಜ.20 ರ ಮಧ್ಯದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.

ಸಹೋದರ ಹೇಮಂತ್‌ ಕುಮಾರ್‌ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next