Advertisement

ಕುಂದಾಪುರ: ಗಾಳಿ ಮಳೆಗೆ ಲಕ್ಷಾಂತರ ರೂ. ನಷ್ಟ 

06:10 AM Jul 13, 2018 | Team Udayavani |

ಕುಂದಾಪುರ: ತಾಲೂಕಿನೆಲ್ಲೆಡೆ ಗುರುವಾರ ಉತ್ತಮ ಮಳೆಯಾಗಿದ್ದು, ಹಲವೆಡೆ ಗಾಳಿ – ಮಳೆಗೆ ಮನೆಗಳಿಗೆ ಹಾನಿ
ಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. 

Advertisement

ನೇರಳಕಟ್ಟೆ : ಮನೆಗೆ ಹಾನಿ ನೇರಳಕಟ್ಟೆಯ ವಾಮನ ನಾಯಕ ಅವರ ಮನೆಗೆ ಮಳೆಯಿಂದಾಗಿ ಹಾನಿ ಯಾಗಿದ್ದು, ಸುಮಾರು 50 ಸಾವಿರ ರೂ. ,ಕಂದಾವರ ಗ್ರಾಮದ ಸಾಧು ಗಾಣಿಗ ಅವರ ಮನೆ ಕುಸಿದು 20 ಸಾವಿರ ರೂ. ನಷ್ಟವಾಗಿದೆ. 

ಬಸ್ರೂರು : ಮರ ಬಿದ್ದು ಹಾನಿ
ಬಸ್ರೂರು ಗ್ರಾಮದ ನೀಲು ಮೊಗವೀರ ಅವರ ಮನೆ ಮೇಲೆ ಮರ ಬಿದ್ದು, ಸುಮಾರು 15 ಸಾವಿರ ರೂ., ಕರ್ಕುಂಜೆ ಗ್ರಾಮದ ಕಿಶೊರಿ ವಿ. ಶೆಟ್ಟಿ ಅವರ ಮನೆಯ ಗೋಡೆ ಕುಸಿದು ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದೆ. 

76 ಹಾಲಾಡಿ ಗ್ರಾಮದ ರಾಮ ನಾಯ್ಕ ಅವರ ಮನೆಯ ಸಿಮೆಂಟು ಶೀಟು ಹಾರಿ ಸುಮಾರು 5 ಸಾವಿರ ರೂ. , ಕೆರಾಡಿ ಗ್ರಾಮದ ಕಾವೇರಿ ನಾಯಕ ಅವರ ಮನೆಯ ಮೇಲ್ಛಾವಣಿಯು ಗಾಳಿ- ಮಳೆಗೆ ಹಾನಿ ಯಾಗಿದೆ. ಕಂದಾವರ ಗ್ರಾಮದ ಸಣ್ಣಮ್ಮ ಶೆಡ್ತಿ ಅವರ ಮನೆಯ ತಗಡು ಶೀಟು ಹಾರಿ ಸಾವಿರಾರು ರೂ. ನಷ್ಟ ಉಂಟಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next