Advertisement

ಕುಂದಾಪುರ: ಗಜವರ್ಣ ಸ್ಪರ್ಧೆ- 2017 ಉದ್ಘಾಟನೆ

07:40 AM Aug 23, 2017 | Team Udayavani |

ಕುಂದಾಪುರ: ಸಾಧನಾ ಕಲಾ ಸಂಗಮ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಗಜವರ್ಣ ಎಂಬ ತಾಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಗಣೇಶ ಚರ್ತುಥಿಯ ಅಂಗವಾಗಿ ಜರಗಿತು.

Advertisement

ಸಾಧನ ಕಲಾಸಂಕಲನ ಚಿತ್ರಕಲಾ ಬಳಗದವರ ಚಿತ್ತಾರ ಚಿತ್ರಕಲಾ ಪ್ರದರ್ಶನವನ್ನು ಖ್ಯಾತ ಸಿವಿಲ್‌ ಎಂಜಿನಿಯರ್‌ ಗುರುರಾಜ್‌ ಕೊಟೇಶ್ವರ ಅವರು ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ಇಂದಿನ ದಿನದಲ್ಲಿ ಪ್ರತಿಯೊಂದು ವಿದ್ಯಾರ್ಥಿ ಅತ್ಯಂತ ಆವಶ್ಯಕ ಹಾಗೂ ಒದ್ದ ವ್ಯಕ್ತಿಯ ಅಭಿವ್ಯಕ್ತಿಯನ್ನು ಬಿಂಬಿಸಲು ಇರು ಶ್ರೇಷ್ಠ ಮಾರ್ಗ ಎಂದರು.

ಅತಿಥಿ ಚಿತ್ರಕಲಾ ಶಿಕ್ಷಕ  ರಾಜಶೇಖರ್‌ ತಾಳಿಕೋಟೆ ಇವರು ಶುಭಹಾರೈಸಿದರು. ಸಾಧನ ಸಂಸ್ಥೆಯ ನಾರಾಯಣ ಐತಾಳ ಸ್ವಾಗತಿಸಿದರು, ಸ್ನೇಹಾ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಮೇಘ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next