Advertisement

Kundapur: ಚಿನ್ನ, ಒಡವೆ ನೀಡದೇ ವಂಚನೆ

11:29 PM Feb 07, 2024 | Team Udayavani |

ಕುಂದಾಪುರ: ಹಂಗಳೂರಿನ ಪೂಜಾ (22) ಅವರಿಗೆ ಚಿನ್ನ ಹಾಗೂ ಒಡವೆ ನೀಡದೇ ವಂಚಿಸಿದ ಕುರಿತು ಚಿಕ್ಕಮ್ಮನ ಮೇಲೆ ದೂರು ನೀಡಲಾಗಿದೆ.

Advertisement

ಪೂಜಾ ಅವರಿಗೆ 2 ವರ್ಷವಿದ್ದಾಗ ಅವರ ತಾಯಿ ಗೀತಾ ಮೃತಪಟ್ಟಿದ್ದು, ಗೀತಾ ಅವರ 10 ಲಕ್ಷ ರೂ. ಹಣ ಮತ್ತು 400 ಗ್ರಾಂನಷ್ಟು ಚಿನ್ನಾಭರಣಗಳನ್ನು ಪೂಜಾ ಅವರ ಅಜ್ಜಿ ಸಾಧು ಯಾನೆ ಶಾರದಾ ಮತ್ತು ಚಿಕ್ಕಮ್ಮಂದಿರಾದ ಸವಿತಾ ಹಾಗೂ ಸುನೀತಾರವರು ಸ್ವಾಧೀನದಲ್ಲಿಟ್ಟು ಕೊಂಡಿದ್ದರು. ಸಾಧು ಅವರು ಆರೋಪಿ ಸುನೀತಾ ಅವರಲ್ಲಿ 10 ಲಕ್ಷ ರೂ. ಪೂಜಾ ಹೆಸರಿಗೆ ಡಿಪಾಸಿಟ್‌ ಇಡುವಂತೆ ಹೇಳಿದ್ದು ಆರೋಪಿ ಸ್ವಂತ ಹೆಸರಿನಲ್ಲಿ ಡಿಪಾಸಿಟ್‌ ಇಟ್ಟು ಪೂಜಾಗೆ 6 ಲಕ್ಷ ರೂ. ರಸೀದಿ ಮಾತ್ರ ನೀಡಿದ್ದರು. ಪ್ರೌಢಶಾಲೆಗೆ ಹೋಗುವಾಗ ಹೊಡೆದು, ಬೈದು, ವಿಷ ಆಹಾರ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು. ಅಜ್ಜಿ ಸಾಧು ಮರಣದ ಅನಂತರ ಚಿನ್ನಾಭರಣ ಹಾಗೂ ಹಣ ವಾಪಸ್‌ ನೀಡದೇ ಮೋಸ ಮಾಡಿದ್ದಾಗಿ ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next