Advertisement

ಕುಂದಾಪುರ ಎಸಿ ಭೂಬಾಲನ್‌ ವರ್ಗಾವಣೆ

12:30 AM Jan 18, 2019 | |

ಕುಂದಾಪುರ: ಕಳೆದ ಒಂದು ವರ್ಷದಿಂದ ಕುಂದಾಪುರ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ. ಭೂಬಾಲನ್‌ ತುಮಕೂರಿನ ಮಹಾನಗರ ಪಾಲಿಕೆ ಆಯುಕ್ತರಾಗಿ ಗುರುವಾರ ವರ್ಗಾವಣೆಗೊಂಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ ಅವರನ್ನು ಪ್ರಭಾರ ಸಹಾಯಕ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

Advertisement

ಭೂಬಾಲನ್‌ ಅವರು ಶುಕ್ರವಾರದಂದು ತುಮಕೂರು ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ತಮಿಳುನಾಡು ಮೂಲದ ಭೂಬಾಲನ್‌ 2015ರ ಐಎಎಸ್‌ ಬ್ಯಾಚ್‌ನ ಅಧಿಕಾರಿಯಾಗಿದ್ದು, 2018ರ ಜ. 16ರಂದು ಕುಂದಾಪುರ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಪಡೆದಿದ್ದರು.

ಆಗಸ್ಟ್‌ನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಸೃಷ್ಟಿಯಾದ ನೆರೆ ಕಾರ್ಯಾಚರಣೆಯಲ್ಲಿ ನಿರಾಶ್ರಿತರ ರಕ್ಷಣೆಯಲ್ಲಿ ಸ್ವತಃ ಭಾಗಿಯಾಗಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.

ಸವಾಲಿನ ಸಂಗತಿ
ಚುನಾವಣಾ ಸಂದರ್ಭ ನಡೆದ ಹಲ್ಲೆ ಪ್ರಕರಣ, ಅಕ್ರಮ ಮರಳುಗಾರಿಕೆ ಸ್ವಲ್ಪ ಮಟ್ಟಿಗಿನ ಸವಾಲಿನ ಸಂಗತಿಯಾಗಿತ್ತು. ಒಟ್ಟಾರೆ ಇಲ್ಲಿನ ಪ್ರಾದೇಶಿಕ ಸೌಂದರ್ಯವನ್ನು ಆನಂದಿಸಿದ್ದೇನೆ. ಇಲ್ಲಿನ ಜನರಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದು ಟಿ. ಭೂಬಾಲನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next