Advertisement
ಪರಿಶೀಲನೆ: 2022ರಲ್ಲಿ ಶಾಸ ಕರಾಗಿದ್ದ ಎಲ್.ಎನ್.ನಾರಾಯಣಸ್ವಾಮಿ ನೇತೃತ್ವ ದಲ್ಲಿ ಸರ್ಕಾರದಿಂದ 18.84 ಲಕ್ಷ ರೂ. ವೆಚ್ಚ ದಲ್ಲಿ ಹಳೆಯ ನಾಡಕಚೇರಿಯನ್ನು ನೆಲ ಸಮಗೊಳಿಸಿ ನೂತನ ಸುಸಜ್ಜಿತವಾದ ಕಟ್ಟಡ ಕಟ್ಟಲಾಗಿದೆ. 4 ತಿಂಗಳ ಹಿಂದೆ ಜಿಲ್ಲಾಧಿಕಾರಿ ಗಳು ನಾಡಕಚೇರಿ ಪರಿಶೀಲನೆ ಮಾಡಿದ್ದಾರೆ. ಆದರೆ, ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಪರದಾಟ:ಕಲ್ಲಿನ ಹಳೆ ಕಟ್ಟಡದಲ್ಲಿದ್ದ ಕಚೇರಿಗಳನ್ನು ತೆರವು ಮಾಡಿದ ಬಳಿಕ ಪಶು ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ 2 ಕೋಣೆಗಳಲ್ಲಿ ಉಪ ತಹಶೀಲ್ದಾರ್ ಕಚೇರಿ, ಖಾಸಗಿ ಕಟ್ಟಡದಲ್ಲಿ ಆರ್ಐ ಮತ್ತು ಗ್ರಾಮ ಲೆಕ್ಕಿಗರು, ಪ್ರತ್ಯೇಕವಾಗಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಇದರಿಂದಾಗಿ ಜನ ಸಮರ್ಪಕ ಸೇವೆ ಪಡೆಯಲು ಪರದಾಡುತ್ತಿದ್ದಾರೆ.
Related Articles
Advertisement
6 ತಿಂಗಳು ಕಳೆದರೂ ಕುಂದಾಣ ನಾಡಕಚೇರಿ ಉದ್ಘಾಟನೆಗೊಂಡಿಲ್ಲ. ಬಡವರನ್ನು ಅನವಶ್ಯಕವಾಗಿ ತಿರುಗಾಡಿಸುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಕೂಡಲೇ ನಾಡಕಚೇರಿ ಲೋಕಾರ್ಪಣೆ ಮಾಡಬೇಕು. ● ಪ್ರವೀಣ್ ಕುಮಾರ್, ಕುಂದಾಣ ಗ್ರಾಮಪಂಚಾಯ್ತಿ ಸದಸ್ಯ
ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ, ಕುಡಿವ ನೀರು, ಶೌಚಾಲಯ, ಭದ್ರತೆಗೆ ತಡೆಗೋಡೆ, ಸಾರ್ವಜನಿಕರು ಕೂರಲು ಆಸನದ ವ್ಯವಸ್ಥೆ ಮಾಡಿಲ್ಲ. ಜಿಲ್ಲಾಧಿಕಾರಿ, ಸಚಿವರ ಗಮನಕ್ಕೆ ತಂದು ಶೀಘ್ರ ಜನರ ಸೇವೆಗೆ ನೀಡಲಾಗುವುದು. ● ಶಿವರಾಜ್, ತಹಶೀಲ್ದಾರ್
ನಾಡ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ. ಸ್ಥಳಾಂತರವಾಗ ಬೇಕಷ್ಟೇ. ನಾಡಕಚೇರಿ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸ್ಥಳಾಂತರಗೊಂಡು ಕೆಲಸ ಕಾರ್ಯ ಅಲ್ಲಿಯೇ ನಿರ್ವಹಿಸಲಾಗುತ್ತದೆ. ● ಬಿ.ಎ.ಚೈತ್ರಾ, ಉಪ ತಹಶೀಲ್ದಾರ್, ಕುಂದಾಣ
– ಎಸ್.ಮಹೇಶ್