Advertisement

6 ಬಾರಿ ಪಕ್ಷೇತರ ಶಾಸಕ ರಾಜಾ ಭಯ್ಯಾ BJPಗೆ? ಇಂದು ಸಿಎಂ ಯೋಗಿ ಭೇಟಿ

11:44 AM Apr 17, 2017 | Team Udayavani |

ಲಕ್ನೋ/ಕುಂದ : ಶಾಸಕ ರಘುರಾಜ್‌ ಪ್ರತಾಪ್‌ ಸಿಂಗ್‌ ಅಲಿಯಾಸ್‌ ರಾಜಾ ಭೈಯ್ಯ ಅವರು ಬಿಜೆಪಿಯನ್ನು ಸೇರುವರೆಂಬ ಊಹಾಪೋಹಗಳು ಈಗ ಗರಿಗೆದರಿವೆ.

Advertisement

ಝೀ ಮೀಡಿಯಾ ವರದಿ ಪ್ರಕಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಂದು ಸೋಮವಾರ ರಾಜಾ ಭೈಯ್ಯ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ರಾಜಾ ಭೈಯ್ಯ ಅರು ಬಾರಿ ಉತ್ತರ ಪ್ರದೇಶದಲ್ಲಿನ ತನ್ನ ಹುಟ್ಟೂರ ಕುಂದ ಕ್ಷೇತ್ರದಿಂದ ಗೆದ್ದು ಬಂದಿರುವ ಪಕ್ಷೇತರ ಶಾಸಕರಾಗಿದ್ದಾರೆ. 2017ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ರಾಜಾ ಭೈಯ್ನಾ ಅವರು ಬಿಜೆಪಿಯ ಜಾನಕಿ ಶರಣ್‌ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬಂದಿರುವುದು ದಾಖಲೆಯೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next