Advertisement

Kumta;ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರು ವಶಕ್ಕೆ, ಯುವತಿಯರ ರಕ್ಷಣೆ

11:06 PM Oct 08, 2023 | Team Udayavani |

ಕುಮಟಾ: ವೇಶ್ಯಾವಾಟಿಕೆ ನಡೆಯುತ್ತಿದ್ದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ಐದು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ತಾಲೂಕಿನ ಬಾಡದ ಜೇಷ್ಠಪುರದ ನೇಸರ ರೆಸಾರ್ಟ್ ನಲ್ಲಿ ನಡೆದಿದೆ.

Advertisement

ನಾಗೇಶ್ ಶೆಟ್ಟಿ, ಆರೀಪ್ ಮುಲ್ಲ ಬಂಧಿತ ವ್ಯಕ್ತಿಗಳಾಗಿದ್ದು ಇವರು ಗ್ರಾಹಕರಿಂದ ಪಡೆದ 12 ಸಾವಿರ ರೂ.ಗೂ. ಹೆಚ್ಚು ನಗದು ,ಮೊಬೈಲ್ ಹಾಗೂ ಕಾಂಡಮ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ಖಚಿತ ಮಾಹಿತಿ ಪಡೆದು ಈ ಕಾರ್ಯಾಚರಣೆ ನಡೆಸಿದ್ದು ದತ್ತು ಪಟಗಾರ ಎಂಬುವವರ ಮಾಲಕತ್ವದ ನೇಸರ ರೆಸಾರ್ಟ್ ಇದಾಗಿದ್ದು ಈ ಯುವಕರು ವಾಟ್ಸ್ ಅಪ್ ಮೂಲಕ ಯುವತಿಯ ಪೋಟೋಗಳನ್ನು ಕಳುಹಿಸಿ ಗ್ರಾಹಕರನ್ನು ಸೆಳೆಯುತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next