Advertisement

ಮಿಝೋರಾಂ ರಾಜ್ಯಪಾಲ ಹುದ್ದೆ ತೊರೆದ ಕುಮ್ಮನಂ ರಾಜಶೇಖರನ್

09:08 AM Mar 08, 2019 | Karthik A |

ನವದೆಹಲಿ: ಮಿಝೊರಾಂ ರಾಜ್ಯಪಾಲರಾಗಿ ಕರ್ತವ್ಯನಿರ್ವಹಿಸುತ್ತಿದ್ದ ಕುಮ್ಮನಂ ರಾಜಶೇಖರನ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಶೇಖರನ್ ಅವರು ತಮ್ಮ ತ್ಯಾಗಪತ್ರವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ್ದು ಅವರ ರಾಜೀನಾಮೆ ಅಂಗೀಕೃತಗೊಂಡಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

Advertisement

ನೂತನ ರಾಜ್ಯಪಾಲರ ನೇಮಕ ಆಗುವವರೆಗೆ ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿರುವ ಪ್ರೊ. ಜಗದೀಶ್ ಮುಖಿ ಅವರಿಗೆ ಹೆಚ್ಚುವರಿಯಾಗಿ ಮಿಝೊರಾಂ ರಾಜ್ಯದ ರಾಜ್ಯಪಾಲರ ಹೊಣೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೀರ್ಘಕಾಲೀನ ಒಡನಾಡಿಯಾಗಿರುವ ರಾಜಶೇಖರನ್ ಅವರು ಕೇರಳ ರಾಜ್ಯದವರಾಗಿದ್ದು ಇಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2018ರ ಮೇ 25ರಂದು ಮಿಝೊರಾಂ ರಾಜ್ಯದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದರು. ರಾಜಶೇಖರನ್ ಅವರ ದಿಢೀರ್ ರಾಜೀನಾಮೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next