Advertisement

ಕುಂಬ್ಳೆ , ಕ್ರಿಕೆಟಿಗರ ನಡುವೆ ಬಿರುಕಿಲ್ಲ?

10:26 AM May 31, 2017 | |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಆಟಗಾರರು ಮತ್ತು ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ನಡುವೆ ಬಿರುಕಿದೆ, ಆಟಗಾರರು ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ವರದಿ ಯೊಂದು ಹೇಳಿತ್ತು. ಮತ್ತೂಂದು ವರದಿ ಪ್ರಕಾರ ಬಿರುಕಿಲ್ಲ, ಭಿನ್ನಮತವಿದೆ ಎಂದು ಹೇಳಲಾಗಿದೆ.

Advertisement

ಕುಂಬ್ಳೆ ಅತ್ಯಂತ ಬಿಗಿ ವರ್ತನೆ ಹೊಂದಿದ್ದಾರೆ. ಆಟಗಾರರಿಗೆ ಸ್ವಾತಂತ್ರ್ಯವನ್ನೇ ನೀಡುವುದಿಲ್ಲ. ಇದರಿಂದ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಅಸಮಾಧಾನಕ್ಕೊಳಗಾಗಿದ್ದಾರೆ. ಬಿಸಿಸಿಐ ಹೊಸ ಕೋಚ್‌ಗೆ ಅರ್ಜಿ ಆಹ್ವಾನಿಸಲು ಇದೂ ಒಂದು ಕಾರಣ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಅಲ್ಲಗಳೆದಿರುವ ಕೆಲ ಮೂಲಗಳು, ಸಣ್ಣಪುಟ್ಟ ಭಿನ್ನಾಭಿಪ್ರಾಯವಿದೆ. ಹಾಗಂತ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಅನಿಲ್‌ ಕುಂಬ್ಳೆ ವಿರುದ್ಧ ಬಿಸಿಸಿಐ ಸಿಟ್ಟಾ ಗಿದೆ. ಅವರು ಸಣ್ಣಪುಟ್ಟ ವಿಚಾರಗಳಿಗೂ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಬಳಿ ತೆರಳುತ್ತಾರೆ. ಇದು ತಮ್ಮ ಅಧಿಕಾರಕ್ಕೆ ಗೌರವವಿಲ್ಲದಂತೆ ಮಾಡಿದೆ ಎನ್ನುವುದು ಬಿಸಿಸಿಐ ನಿಲುವು.

Advertisement

Udayavani is now on Telegram. Click here to join our channel and stay updated with the latest news.

Next