Advertisement

ಕುಂಭಾಶಿ ಅಪಘಾತ: ಗಾಯಾಳು ಮಹಿಳಾ ಪೊಲೀಸ್‌ ಪೇದೆ ಸಾವು

09:06 AM Aug 02, 2019 | keerthan |

ತೆಕ್ಕಟ್ಟೆ: ರಾ.ಹೆ.66ರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾ ಯಕ ದೇವಸ್ಥಾನದ ಮಹಾದ್ವಾರದ ಸಮೀಪ ಎರಡು ಬೈಕುಗಳು ಮುಖಾಮುಖೀ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಸಿಬಂದಿ ಹೇಮಾ (32) ಅವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

Advertisement

ಬುಧವಾರ ರಾತ್ರಿ ಕುಂಭಾಶಿ ಗಾಯತ್ರಿ ಕಂಫರ್ಟ್‌ನ ಸಭಾಂಗಣ ದಲ್ಲಿ ಜರಗಿದ್ದ ಕುಂದಾಪುರ ವಲಯದ ಹಿರಿಯ ಅರಣ್ಯ ರಕ್ಷಕರ ಬೀಳ್ಕೊಡುಗೆ ಸಮಾರಂಭ ಮುಗಿಸಿ ಬೈಕಿನಲ್ಲಿ ಪತಿ ಜತೆಗೆ ಮನೆಗೆ ತೆರಳುತ್ತಿದ್ದಾಗ ಅತಿ ವೇಗದಿಂದ ಬಂದ ಬುಲೆಟ್‌ ಢಿಕ್ಕಿ ಹೊಡೆದಿತ್ತು. ಪರಿಣಾಮ ಬೈಕಿನ ಹಿಂಬದಿ ಸವಾರೆ ಹೇಮಾ ಅವರ ತಲೆಗೆ ತೀವ್ರ ಸ್ವರೂಪದ ಏಟಾಗಿತ್ತು. ಅವರು ಆಸ್ಪತ್ರೆ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದರು.

ಪತಿ ಗಂಭೀರ
ಗಂಭೀರ ಗಾಯಗೊಂಡಿರುವ ಹೇಮಾ ಅವರ ಪತಿ ತೆಗ್ಗರ್ಸೆ ನಿವಾಸಿ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎರಡನೇ ದರ್ಜೆಯ ಸಹಾಯಕರಾಗಿ ರುವ ನಾಗರಾಜ್‌ ಕೊತ್ವಾಲ್‌ (35) ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next