Advertisement

ಹರಿದ್ವಾರ: 2021ರ ಕುಂಭಮೇಳ, ಜನರ ಸುರಕ್ಷತೆಗಾಗಿ ಎನ್ ಎಸ್ ಜಿ ಕಮಾಂಡೋಸ್ ರವಾನೆ

10:13 AM Jan 14, 2021 | Nagendra Trasi |

ಡೆಹ್ರಾಡೂನ್: 2021ರ ಕುಂಭಮೇಳದ ಹಿನ್ನೆಲೆಯಲ್ಲಿ ದೇಶ ವಿರೋಧಿ ಶಕ್ತಿಗಳನ್ನು ನಿಗ್ರಹಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸುರಕ್ಷತೆಗಾಗಿ ಹರಿದ್ವಾರಕ್ಕೆ ಎನ್ ಎಸ್ ಜಿ ಕಮಾಂಡೋಸ್ ಗಳನ್ನು ಕಳುಹಿಸಲಾಗುವುದು ಎಂದು ಉತ್ತರಾಖಂಡ್ ಸರ್ಕಾರ ಗುರುವಾರ(ಜನವರಿ 14, 2021) ಘೋಷಿಸಿದೆ.

Advertisement

ಕುಂಭಮೇಳದ ಸಂದರ್ಭದಲ್ಲಿ ಎನ್ ಎಸ್ ಜಿಯನ್ನು ಕಳುಹಿಸುವ ಕುರಿತು ಎನ್ ಎಸ್ ಜಿ ಮೇಜರ್ ಜನರಲ್ ವಿಎಸ್ ರಾನಡೆ ಅವರು ಉತ್ತರಾಖಂಡ್ ಪೊಲೀಸ್ ಕಮೀಷನರ್ ಅಶೋಕ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ದೇಶ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಎನ್ ಎಸ್ ಜಿಯ ಎರಡು ತಂಡಗಳನ್ನು ಕಳುಹಿಸಲಾಗುವುದು ಎಂದು ಅಶೋಕ್ ಕುಮಾರ್ ತಿಳಿಸಿದ್ದು, ಎನ್ ಎಸ್ ಜಿ ತಂಡ ನಮ್ಮ ಭಯೋತ್ಪಾದಕ ನಿಗ್ರಹ ದಳಕ್ಕೂ ತರಬೇತಿ ನೀಡಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಹಾಗೂ ಜನಜಂಗುಳಿ, ಸುರಕ್ಷತೆ ಕುರಿತಂತೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಂಡಿದೆ ಎಂಬ ವರದಿ ಸಲ್ಲಿಸುವಂತೆ ಉತ್ತರಾಖಂಡ್ ಹೈಕೋರ್ಟ್ ಸೂಚಿಸಿತ್ತು.

ಮಾರ್ಚ್-ಏಪ್ರಿಲ್ ನಲ್ಲಿ ನಡೆಯುವ ಕುಂಭಮೇಳದ ವೇಳೆ ಅಗತ್ಯವಾದ ವೆಂಟಿಲೇಟರ್ಸ್, ಐಸಿಯು, ಆಸ್ಪತ್ರೆ ಬೆಡ್ ಗಳು, ಉಪಕರಣ, ಸಿಬ್ಬಂದಿ ವರ್ಗದ ಮಾಹಿತಿಯನ್ನೊಳಗೊಂಡ ವರದಿಯನ್ನು ಫೆಬ್ರುವರಿ 21ಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next