Advertisement

ನೆರವಿಗೆ ಕೈಜೋಡಿಸಿದ ಅವಧೂತರು

03:23 PM Apr 10, 2020 | Naveen |

ಕುಮಟಾ: ದೇಶವನ್ನೇ ಸಂಕಷ್ಟದ ಪರಿಸ್ಥಿತಿಗೆ ದೂಡಿರುವಕೋವಿಡ್  ಸೋಂಕಿನ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ದೀವಗಿಯ ಆಂಜನೇಯ ಮಠದ ಶ್ರೀ ರಮಾನಂದ ಅವಧೂತರು ಪ್ರಧಾನಮಂತ್ರಿ ಪರಿಹಾರನಿಧಿಗೆ 50 ಸಾವಿರ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಸಾವಿರ ರೂ. ಚೆಕ್‌ ಗಳನ್ನು ಶಾಸಕ ದಿನಕರ ಶೆಟ್ಟಿ ಅವರಿಗೆ ಗುರುವಾರ ಹಸ್ತಾಂತರಿಸಿದರು.

Advertisement

ರಾಷ್ಟ್ರ ಹಾಗೂ ರಾಜ್ಯ ಕೋವಿಡ್ ವೈರಸ್‌ನ ಸಂಕಷ್ಟದಿಂದ ಆದಷ್ಟು ಶೀಘ್ರವಾಗಿ ಹೊರಬರಲಿ ಎಂದು ಆಶೀರ್ವದಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ತಾಲೂಕಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪ್ರಮುಖರಾದ ಡಾ| ಜಿ.ಜಿ. ಹೆಗಡೆ, ಪ್ರಕಾಶ ಪಂಡಿತ, ಎಂ.ಎಸ್‌. ಹೆಗಡೆ, ಸತೀಶ ಅಂಬಿಗ, ಅನಿಲ ಭಂಡಾರಿ, ಸುಭಾಸ ಅಂಬಿಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next