Advertisement

ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್‌

10:20 PM Feb 08, 2023 | Team Udayavani |

ಬೆಂಗಳೂರು: ನಾಳೆ ಏನಾಗುತ್ತದೆ ಎಂಬುದು ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಯವರಿಗೆ ತಿಳಿಯುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ವ್ಯಂಗ್ಯವಾಡಿದ್ದಾರೆ.

Advertisement

“ವಿಜಯ ಸಂಕಲ್ಪ’ ಯಾತ್ರೆ ಪ್ರಮುಖರಾಗಿ ನೇಮಕಗೊಂಡ ಬೆನ್ನಲ್ಲೇ ಪಕ್ಷದ ಕಚೇರಿಗೆ ತೆರಳಿ ಸಭೆ ನಡೆಸಿದ ಅವರು, ಲಿಂಗಾಯತ ಸಮುದಾಯವೇ ಈ ಬಾರಿ ಬಿಜೆಪಿಯನ್ನು ಸೋಲಿಸುತ್ತದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರ ತಲೆಯಲ್ಲಿ ಯಾವಾಗ ಯಾವ ಯೋಚನೆ ಬರುತ್ತದೆಯೋ ಗೊತ್ತಿಲ್ಲ. ನಾಳೆ ಏನಾಗುತ್ತದೆ ಎಂಬುದು ಭಗವಂತನಿಗಿಂತ ಮೊದಲೇ ಅವರಿಗೆ ತಿಳಿಯುತ್ತದೆ. ಕುಮಾರಸ್ವಾಮಿಯವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಹಾಸನದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಕುಮಾರಸ್ವಾಮಿಯವರು ಮೊದಲು ಮಾತನಾಡಲಿ. ಅವರ ಕುಟುಂಬದ ಸಮಸ್ಯೆಯನ್ನು ಮೊದಲು ಬಗೆಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಫೆಬ್ರವರಿ ತಿಂಗಳ ಕೊನೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗುತ್ತದೆ. ಇದರ ಸ್ವರೂಪ ಹೇಗಿರಬೇಕು, ಎಲ್ಲೆಲ್ಲಿ, ಯಾರ್ಯಾರನ್ನು ತಾರಾ ಪ್ರಚಾರಕರಾಗಿ ಕರೆಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸದ್ಯದಲ್ಲೇ ಸಭೆ ನಡೆಸಿ ನಿರ್ಧರಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next