Advertisement

ಕುಕ್ಕೆ ಸುಬ್ರಹ್ಮಣ್ಯ : ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರಪಾದಕ್ಕೆ ಪೂಜೆ

11:44 PM Dec 22, 2022 | Team Udayavani |

ಸುಬ್ರಹ್ಮಣ್ಯ : ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಗುರುವಾರ ಮಧ್ಯಾಹ್ನದ ವೇಳೆಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.

Advertisement

ದೇಗುಲದ ಆಡಳಿತ ಮಂಡಳಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಾಗಾರಾಧನೆಯ ಪ್ರಸಿದ್ಧ ತಾಣ ಕುಕ್ಕೆ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯ ಕೊನೆಯಲ್ಲಿ ಅರ್ಚಕರು ಕುಮಾರನ ಪಾದಗಳಿಗೆ ಜಲಾಭಿಷೇಕ, ಸೀಯಾಳ ಅಭಿಷೇಕ ಮಾಡಿದರು. ಬಳಿಕ ಅರಸಿನ ಮತ್ತು ಕಲ್ಲು ಸಕ್ಕರೆಯನ್ನು ಪಾದಗಳಿಗೆ ಅರ್ಪಿಸಿ ಪುಷ್ಪಾಲಂಕಾರ ಮಾಡಿ ಫಲಸಮರ್ಪಣೆ, ನೈವೇದ್ಯ ಸಮರ್ಪಣೆ, ಪೂಜೆ ನೆರವೇರಿಸಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್‌ ಎಂ., ಶೋಭಾ ಗಿರಿಧರ್‌, ಮಾಸ್ಟರ್‌ಪ್ಲಾನ್‌ ಸದಸ್ಯ ಮನೋಜ್‌ ಎಸ್‌. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next