Advertisement
ದಾಸ್ತಾನಿಗೆ ಮಾತ್ರ ಅನುಮತಿ ಇಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಮರಳು ದಾಸ್ತಾನು ಮಾಡಲು 2 ವರ್ಷಗಳ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಯಾಂತ್ರೀಕೃತ ಮರಳುಗಾರಿಕೆ ಮಾಡುವಂತಿಲ್ಲ. ಲೋಕೋಪ ಯೋಗಿ ಇಲಾಖೆಯ ನಿಯಮದ ಪ್ರಕಾರ ಖಾಸಗಿಯವರು ಮರಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಇಲ್ಲಿ ನದಿಯಿಂದ ಹಿಟಾಚಿ ಬಳಿಸಿ ಮರಳು ತೆಗೆದು ದಾಸ್ತಾನು ಮಾಡಿ ಇಲಾಖಾ ಷರತ್ತುಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಹಗಲೆನ್ನದೆ ನೂರಾರು ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಾಹಸ ಪಡಬೇಕು. ಅದೇ ಅಕ್ರಮ ದಂಧೆಕೋರರು ರಾಜಾರೋಷವಾಗಿ ಯಂತ್ರಗಳನ್ನು ಉಪಯೋಗಿಸಿ ಮರಳುಗಾರಿಕೆ ನಡೆಸುತ್ತಾರೆ. ಸ್ಥಳೀಯರು ಕಾರ್ಮಿಕರನ್ನು ಬಳಸಿ ಮರಳು ತೆಗೆದರೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಆದರೆ ಯಾಂತ್ರ ಬಳಸಿ ಮರಳು ತೆಗೆದು ದುಪ್ಪಟ್ಟು ದರಕ್ಕೆ ಮರಳು ಮಾರುವವರನ್ನು ಮಾತ್ರ ಕೇಳುವವರಿಲ್ಲ. ಇಲ್ಲಿ ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂದು ಸ್ಥಳೀಯರಾದ ಹೈದರ್ ಮರ್ದಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಯ ತಾಲೂಕಿನ ಕೇನ್ಯ ಗ್ರಾಮದಲ್ಲಿ ಕುಮಾರಧಾರಾ ನದಿಯಿಂದ ಮರಳು ತೆಗೆದು ದಾಸ್ತಾನು ಮಾಡಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶ ಇಲ್ಲ. ಮರಳು ಮಾರಾಟ ಮಾಡಲು ಕೂಡ ಖಾಸಗಿಯವರಿಗೆ ಅವಕಾಶ ಇಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎಂ.ಎಂ. ಗಣೇಶ್, ಸುಳ್ಯ ತಹಶೀಲ್ದಾರ್.
Related Articles
Advertisement