Advertisement

ಕುಮಾರ ಕ್ಷತ್ರಿಯ ಸಂಘ: 53ನೇ ವಾರ್ಷಿಕ ದಿನಾಚರಣೆ

01:07 PM Mar 12, 2019 | |

ಮುಂಬಯಿ: ಕುಮಾರ ಕ್ಷತ್ರಿಯ ಸಂಘ ಮುಂಬಯಿ ಇದರ  53ನೇ ವಾರ್ಷಿಕ ದಿನಾಚರಣೆಯು ಮಾ. 3ರಂದು ಬೆಳಗ್ಗೆ 10ರಿಂದ ಸಾಂತಾಕ್ರೂಜ್‌ ಪೂರ್ವದ ಮಾಧವ ಭವನ  ಪೇಜಾವರ ಮಠದಲ್ಲಿ ಶ್ರೀ  ಸತ್ಯನಾರಾಯಣ ಮಹಾಪೂಜೆಯೊಂದಿಗೆ ವಿಜೃಂಭಣೆ ಯಿಂದ ನಡೆಯಿತು.

Advertisement

ಅರಸಿನ ಕುಂಕುಮ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಾಲಿನಿ  ಎಂ. ರಾವ್‌  ಅವರ ನೇತೃತ್ವದಲ್ಲಿ  ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ನಂತರ ನಡೆದ ಪರಿಷತ್ತಿನ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ. ಡಿ. ರಾವ್‌ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ,  ಸಮಾಜ ಬಾಂಧವರಿಗಾಗಿ ಸ್ವಂತ  ಕಚೇರಿ ಪಡೆದುಕೊಳ್ಳುವ ವಿಷಯದಲ್ಲಿ ಸಭಿಕರೊಂದಿಗೆ ಚರ್ಚಿಸಿ, ಎಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.

ಆರಂಭಿಸುವ ಮೊದಲು ಪುಲ್ವಾಮಾದಲ್ಲಿ ಹುತಾತ್ಮರಾದ  ವೀರ ಯೋಧರಿಗೆ ಹಾಗೂ 2018-2019ರಲ್ಲಿ ನಿಧನರಾದ ನಮ್ಮ ಸಂಸ್ಥೆಯ ಸದಸ್ಯಭಾಂದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಕೋಶಾಧಿಕಾರಿ ಶ್ರೀ ಶಾಂತಾರಾಮ ಜೆ. ಮಾಂಗಾಡ್‌ ಲೆಕ್ಕ ಪತ್ರವನ್ನು ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಎಸ್‌ಎಲ್‌ಸಿ ಪದವೀಧರ ಮತ್ತು ಸ್ನಾತಕೋತ್ತರ ಪದವೀಧರರಿಗೆ ಸಂಘದ  ಜೇಷ್ಠ ಸದಸ್ಯರಾದ ಪ್ರಭಾ ಎಂ. ರಾವ್‌  ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ  ಪುಸ್ತಕವನ್ನು, ಇನ್ನೋರ್ವ ಜೇಷ್ಠ ಸದಸ್ಯರಾದ ಉಮಾ ಶಿವ ರಾವ್‌ ಇವರಿಬ್ಬರ ಹಸ್ತದಿಂದ ನೀಡಲಾಯಿತು. ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ನಂತರ ನಮ್ಮ ದಿವಂಗತ ಮಾಜಿ ಅಧ್ಯಕ್ಷರಾದ ಪ್ರಮೋದ್‌ ರಾವ್‌ ಅವರು ಸಮುದಾಯಕ್ಕೆ  ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು  ದಿವಂಗತರ ಪತ್ನಿ ಪ್ರತಿಮಾ ರಾವ್‌ ಹಾಗೂ ಪುತ್ರ  ಸಾಗರ ರಾವ್‌ ಅವರಿಗೆ  ಸಮುದಾಯದ ವತಿಯಿಂದ ಜೇಷ್ಠ ಸದಸ್ಯರಾದ ನೀಲಾಕ್ಷಿ ಪ್ರಭಾಕರ್‌ ಬೇಕಲ್‌ ಅವರ ಹಸ್ತದಿಂದ ನೀಡಲಾಯಿತು. ಕಾರ್ಯಕ್ರಮವನ್ನು   ಸಮಿತಿಯ ಸದಸ್ಯರಾದ ಶಾಲಿನಿ ಎಂ. ರಾವ್‌ ಅವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೂತನ ಮಹಿಳಾ ವಿಭಾಗವನ್ನು ರಚಿಸಲಾಯಿತು.

Advertisement

ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಮಿಲಿಂದ ರಾವ್‌ ಅವರು ಆಯ್ಕೆಯಾದರೆ, ಇತರ ಪದಾಧಿಕಾರಿಗಳಾಗಿ ಉಮಾ ಶಿವ ರಾವ್‌ ,  ಕಲ್ಪನಾ  ಶಶಿ ರಾವ್‌, ಬಿಂದು ಕುಂದರ್‌, ಕವಿತಾ ರೋಹನ್‌, ವಿಶಾಲಾಕ್ಷಿ ಅರುಣ ಚಂದ್ರಗಿರಿ, ದಿವ್ಯಾ ಕಲ್‌ನಾಡ್‌ ಅವರು ಆಯ್ಕೆಯಾದರು. ವೇದಿಕೆಯಲ್ಲಿ ಅಧ್ಯಕ್ಷ ಎಂ. ಡಿ. ರಾವ್‌, ಉಪಾಧ್ಯಕ್ಷ  ರವಿ ಚಂದ್ರಗಿರಿ, ಜತೆ ಕಾರ್ಯದರ್ಶಿ  ಉಮಾನಾಥ್‌ ರಾವ್‌, ಕೋಶಾಧಿಕಾರಿ  ಶಾಂತರಾಮ್‌ ಜೆ. ಮಾಂಗಾಡ್‌, ಸಲಹೆಗಾರ  ಬಿ. ಎಸ್‌. ರಾವ್‌, ಸದಸ್ಯರಾದ  ಶಾಲಿನಿ ಎಂ. ರಾವ್‌,  ರವಿ ಎಸ್‌. ಕಲ್‌ನಾಡ್‌, ಸಾಗರ್‌ ಪಿ. ರಾವ್‌,  ಕೆ. ಎಂ. ರಾವ್‌, ಸುರೇಂದ್ರ  ಎ. ರಾವ್‌ ಅವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ  ಉಮಾನಾಥ ರಾವ್‌ ವಂದಿಸಿದರು. 

ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next