Advertisement

ಕುಲು ಮೇಘಸ್ಪೋಟ; 29 ದೇಶಗಳ 687 ಪ್ರವಾಸಿಗರ ಸ್ಥಳಾಂತರ: 22 ಮಂದಿ ನಾಪತ್ತೆ

08:26 PM Jul 16, 2023 | Team Udayavani |

ಕುಲು : ಹಿಮಾಚಲ ಪ್ರದೇಶದ ಕುಲುದಲ್ಲಿ ಮೇಘಸ್ಪೋಟದಿಂದ ಪ್ರವಾಸಿಗರು ತತ್ತರಿಸಿ ಹೋಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿಕೊಂಡವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಕುಲುನಲ್ಲಿ ಇದುವರೆಗೆ ಸುಮಾರು 70,000 ಜನರನ್ನು ಸ್ಥಳಾಂತರಿಸಲಾಗಿದೆ.ನಾವು 29 ದೇಶಗಳಿಂದ ಬಂದ 687 ಪ್ರವಾಸಿಗರನ್ನು ಸ್ಥಳಾಂತರಿಸಿದ್ದೇವೆ. ಕುಲುವಿನಲ್ಲಿ 18 ಮತ್ತು ಶ್ರೀಖಂಡ್ ಮಹಾದೇವ್‌ನಲ್ಲಿ 8 ಮೃತದೇಹಗಳನ್ನು ಪತ್ತೆ ಮಾಡಿದ್ದು ಒಟ್ಟು 26 ಮೃತ ದೇಹಗಳನ್ನು ಇದುವರೆಗೆ ಪತ್ತೆ ಮಾಡಲಾಗಿದೆ. 22 ಜನರು ಕಾಣೆಯಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಂದು ಹಿಮಾಚಲ ಪ್ರದೇಶದ ಡಿಜಿಪಿ ಸಂಜಯ್ ಕುಂದು ಹೇಳಿದ್ದಾರೆ.

ಜೂನ್ 24 ರಿಂದ ಜುಲೈ 14 ರ ವರೆಗೆ ಹಿಮಾಚಲ ಪ್ರದೇಶದಲ್ಲಿ 108 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ, ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದಿಂದಾಗಿ 36 ಸಾವುಗಳು ಸಂಭವಿಸಿವೆ ಮತ್ತು ರಸ್ತೆ ಅಪಘಾತ, ಬೆಂಕಿ, ಮುಳುಗುವಿಕೆ, ಹಾವು ಕಡಿತ, ವಿದ್ಯುದಾಘಾತ ಮತ್ತು ಕಡಿದಾದ ಪ್ರದೇಶಗಳಲ್ಲಿ ಬಂಡೆಗಳ ಉರುಳುವಿಕೆಯಿಂದಾಗಿ 72 ಸಾವುಗಳು ಸಂಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next