Advertisement

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

01:34 AM Jan 29, 2022 | Team Udayavani |

ಮಂಗಳೂರು: ಮಂಗಳೂರು ಜಂಕ್ಷನ್‌- ಪಣಂಬೂರು ರೈಲುಮಾರ್ಗದ ಕುಲಶೇಖರದಲ್ಲಿ ಎರಡನೇ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

Advertisement

ಅಲ್ಲಿ ಹಳಿ ಅಳವಡಿಕೆ ಕಾರ್ಯ ಫೆಬ್ರವರಿ ಪ್ರಥಮ ವಾರದಲ್ಲಿ ಪ್ರಾರಂಭವಾಗಲಿದೆ. ಜತೆಗೆ ವಿದ್ಯುತ್‌ ಲೈನ್‌, ಕಮ್ಯೂನಿಕೇಶನ್‌ ಲೈನ್‌ ಅಳವಡಿಕೆ ಮುಂತಾದ ಕೆಲಸಗಳು ನಡೆಯಲಿದ್ದು, ನೂತನ ಸುರಂಗಮಾರ್ಗದಲ್ಲಿ ಸಂಚಾರ ಬಹುತೇಕ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಬಳಿಕ ಪ್ರಸ್ತುತ ಇರುವ ಸುರಂಗವನ್ನು ಸ್ವಲ್ಪಕಾಲ ದುರಸ್ತಿಗಾಗಿ ಮುಚ್ಚುವ ಸಾಧ್ಯತೆಗಳಿವೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಮಂಗಳೂರು ಜಂಕ್ಷನ್‌- ಪಣಂಬೂರು ಮಧ್ಯೆ ಇರುವ 21 ಕಿ.ಮೀ. ರೈಲು ಮಾರ್ಗದಲ್ಲಿ ಈಗಾಗಲೇ 17 ಕಿ.ಮೀ.ಯಲ್ಲಿ ಹಳಿ ದ್ವಿಗುಣ ಪೂರ್ಣಗೊಂಡಿದೆ. ಸುರಂಗ ಮಾರ್ಗದ 600 ಮೀಟರ್‌ ಸೇರಿದಂತೆ ಒಟ್ಟು 4 ಕಿ.ಮೀ. ಹಳಿ ದ್ವಿಗುಣಕ್ಕೆ ಬಾಕಿ ಇದೆ. ಡಿ.ವಿ. ಸದಾನಂದ ಗೌಡ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಮಂಗಳೂರು ಜಂಕ್ಷನ್‌-ಪಣಂಬೂರು ರೈಲು ಮಾರ್ಗದ ಹಳಿ ದ್ವಿಗುಣ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next