Advertisement

ಕುಲಾಲ ಸಂಘ ಥಾಣೆ-ಭಿವಂಡಿ:ಸಾಧಕರಿಗೆ ಸಮ್ಮಾನ

04:49 PM Nov 04, 2017 | Team Udayavani |

ಕಲ್ಯಾಣ್‌: ಕುಲಾಲ ಸಂಘ ಮುಂಬಯಿ ಇದರ ಥಾಣೆ-ಕಸರಾ-ಕರ್ಜತ್‌- ಭಿವಂಡಿ ಸ್ಥಳೀಯ ಸಮಿತಿಯ 14 ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಅ. 29 ರಂದು ಕಲ್ಯಾಣ್‌ ಪೂರ್ವದ ವಲೀಫಿರ್‌ ರೋಡ್‌, ಜಶ್ರಾಜ್‌ ಕಮರ್ಷಿಯಲ್‌ ಕಾಂಪ್ಲೆಕ್ಸ್‌ನ ಮೌರ್ಯಗ್ರೌಂಡ್‌ ಬ್ಯಾಂಕ್ವೆಟ್‌  ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸುದೀರ್ಘ‌ ಕಾಲ ಸೇವೆಗೈದ ಹಾಗೂ ದಾನಿಗಳಾದ ಗಣೇಶ್‌ ಬಿ. ಬಂಗೇರ ಡೊಂಬಿವಲಿ, ಎಲ್‌. ಆರ್‌. ಮೂಲ್ಯ ಪನ್ವೇಲ್‌, ಸುಧಾಕರ ಎನ್‌. ಮೂಲ್ಯ ಡೊಂಬಿವಲಿ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.

ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವರದಿ ವರ್ಷದಲ್ಲಿ ಅತೀ ಹೆಚ್ಚು ಅಂಕ ಪ‌ಡೆದ ಸಮಾಜ ಬಾಂಧವರ ಎಸ್‌ಎಸ್‌ಸಿ, ಎಚ್‌ಎಸ್‌ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸಂಘದ ಉಪಾಧ್ಯಕ್ಷ ದೇವದಾಸ್‌ ಕುಲಾಲ್‌, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಮೂಲ್ಯ, ಉಪಕಾರ್ಯಾಧ್ಯಕ್ಷ ಸುಧಾಕರ ಬಂಗೇರ,ಗೌರವ ಕಾರ್ಯದರ್ಶಿ ಲಕ್ಷ್ಮಣ್‌ ಮೂಲ್ಯ, ಗೌರವ ಕೋಶಾಧಿಕಾರಿ ಸದಾಶಿವ ಬಂಗೇರ, ಸಂಘದ ಹಾಗೂ ಸಮಿತಿಯ ಇತರ  ಪದಾಧಿಕಾರಿಗಳಾದ ಡಿ. ಐ. ಮೂಲ್ಯ, ಜಯ ಅಂಚನ್‌, ಮಮತಾ ಗುಜರನ್‌,ರೇಖಾ ಮೂಲ್ಯ, ಉಮಾ ಸಾಲ್ಯಾನ್‌, ಶೇಖರ ಮೂಲ್ಯ,ಮೋಹನ್‌ ಬಂಜನ್‌, ಶೇಖರ ಬಿ. ಮೂಲ್ಯ, ರಘುಮೂಲ್ಯ, ಶಂಕರ ಮೂಲ್ಯ, ಕೃಷ್ಣ ಬಂಗೇರ, ಹರಿಯಪ್ಪಮೂಲ್ಯ,ರಮೇಶ್‌ ಎಸ್‌. ಮೂಲ್ಯ, ಯಶ್ಮಿತಾ ಮೂಲ್ಯ, ಕವಿತಾ ಮೂಲ್ಯ, ಆಶಾ ಬಂಗೇರ, ವಸಂತಿ ಬಂಜನ್‌, ಭಾರತಿ ಆರ್ಕೇನ್‌, ರವಿಕುಲಾಲ್‌,ಕುಶ ಬಿ. ಕುಲಾಲ್‌, ವಿ. ಜಿ. ಮೂಲ್ಯ, ವಾಮನ್‌ ಬಂಗೇರ,ರಮೇಶ್‌ ಮೂಲ್ಯ, ಸದಾನಂದ ಸಾಲ್ಯಾನ್‌, ಶೈಲೇಶ್‌ ಮೂಲ್ಯ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next