Advertisement

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ-ಪರಿಶೀಲನೆ

12:33 PM Apr 10, 2020 | Team Udayavani |

ಕುಳಗೇರಿ ಕ್ರಾಸ್‌: ಬಾದಾಮಿ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಆರ್‌.ಎಂ. ಶಿರೂರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಕಿಶೋರಕುಮಾರ ತಾಲೂಕು ಆರೋಗ್ಯ ಇಲಾಖೆ ಅ ಧಿಕಾರಿ ಡಾ| ಎಂ ಬಿ ಪಾಟೀಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಆರೋಗ್ಯ ಕೇಂದ್ರದ ಕುಂದು ಕೊರತೆ ವಿಚಾರಿಸಿದರು.

Advertisement

ಮಾಸ್ಕ್, ಸದ್ಯಕ್ಕೆ ಬೇಕಾಗಿರುವ ಔಷ ಧ ಸೇರಿದಂತೆ ರೋಗಿಗಳಿಗೆ ಬೇಕಾದ ಸೌಲಭ್ಯಗಳ ಕುರಿತು ವಿಚಾರಿಸಿದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವೈ.ಜೆ. ಮನಿಯಾರ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಯಾವ ವ್ಯಕ್ತಿಗೂ ವೈರಸ್‌ ಕಂಡು ಬಂದಿಲ್ಲ. ಬೇರೆ ಗ್ರಾಮ, ಪಟ್ಟಣಗಳಿಂದ ಬಂದವರನ್ನು ತಪಾಸಣೆ ಮಾಡಲಾಗಿದೆ. ಕಾಸರಗೋಡದಿಂದ ಬಂದಿದ್ದ ಕೆಲವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next